ತಾವರಗೇರಾ ಪಟ್ಟಣದಲ್ಲಿಂದು ಐವರಿಂದ ಉಪವಾಸ ಸತ್ಯಗ್ರಾಹ. ಈ ಹೋರಾಟಕ್ಕೆ ವಿಶೇಷ ಹೋರಾಟ ಮಹಿಳೆಯರಿಂದ ಬೆಂಬಲ.

Spread the love

ತಾವರಗೇರಾ ಪಟ್ಟಣದಲ್ಲಿಂದು ಐವರಿಂದ ಉಪವಾಸ ಸತ್ಯಗ್ರಾಹ. ಈ ಹೋರಾಟಕ್ಕೆ ವಿಶೇಷ ಹೋರಾಟ ಮಹಿಳೆಯರಿಂದ ಬೆಂಬಲ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಐವರಿಂದ ುಪವಾಸ ಸತ್ಯಾಗ್ರಹ ಆರಂಭಿಸಿದ್ದು, ಈ ಹೋರಾಟಕ್ಕೆ ಬೆನ್ನೆಲುಭಾಗಿ ವಿಶೇಷ ಹೋರಾಟ ಮಹಿಳೆಯರು ಭಾಗಿಯಾಗುವ ಮೂಲಕ  ಸಂವಿಧಾನ ಹಿತ ರಕ್ಷಣಾ ಸಮೀತಿವತಿಯವರಿಗೆ ಬೆಂಬಲ ನೀಡಿದರು.  ಡಾಬಿ.ಆರ್. ಅಬೇಡ್ಕರ್ ವೃತ್ತದಲ್ಲಿ ಇಂದು ಐವರಿಂದ ಸರಣಿ ಉಪವಾಸ ಸತ್ಯಗ್ರಾಹ ಪ್ರಾರಂಭಿಸಿದರು. ನ್ಯಾಯಧೀಶರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂವಿಧಾನ ಹಿತ ರಕ್ಷಣಾ ಸಮಿತಿವತಿಯಿಂದ ಇಂದು 4ನೇ ದಿನಕ್ಕೆ ುಪವಾಸ ಸತ್ಯಾಗ್ರಹ ಮುಂದೂಡಿದ್ದು, ಇಂದು ಐವರಿಂದ ಉಪವಾಸ ಸತ್ಯಗ್ರಾಹದಲ್ಲಿ ಪಾಲುಗೊಂಡಿದ್ದು 1) ಗೌತಮ್ ಬಂಡಾರಿ, 2) ದೇವರಾಜ ಪಂಜೇದ್, 3) ವಿಜೇಯಕುಮಾರ ಚಲುವಾದ, 4) ದುರಗೇಶ ದೇವರಮನಿ, 5) ಗಣೇಶ ನಾರಿನಾಳ ಇವರು ಉಪವಾಸ ಸತ್ಯಗ್ರಾಹ ಹಮ್ಮಿಕೊಂಡು ಪ್ರಭಲವಾದ ಬೇಡಿಕೆಯನ್ನು ಮುಂದಿಟ್ಟುಕೊಂಡ ವಿಷಯ :- ಶ್ರೀ ಡಾ.ಬಿಆರ್. ಅಂಬೇಡ್ಕರ್ ಅವರ ಭಾವತ್ರಕ್ಕೆ & ಸಂವಿಧಾನಕ್ಕೆ  ಅವಮಾನ ಮಾಡಿದ ನ್ಯಾಯಾದೀಶರ ವಿರುದ್ಧ ಕೂಡಲೆ ದೂರು ದಾಖಲಾಗುಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ನಿರಂತರ ಉಪವಾಸ ಸತ್ಯಾಗ್ರಾಹ ಧರಣಿ ಹಮ್ಮಿಕೊಳ್ಳುತ್ತೆವೆ ಎಂದು ಹೇಳಿಕೆ ನೀಡಿದರು. ನ್ಯಾಯಧೀಶರ ವಿರುದ್ದ ಹಲವು ಘೋಷಣೆ ಕೂಗುವುದರ, ಜೊತೆಗೆ ಹೋರಾಟದ ಕಿಚ್ಚು ಇರುವ ಹಾಡುಗಳನ್ನ ಹಾಡುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಹೋರಾಟಕ್ಕೆ ತಾವರಗೇರಾ ಪಟ್ಟಣದ ಹಿರಿಯ ನಾಯಕರು ಹಾಗೂ ಬುದ್ದಿ ಜೀವಿಗಳು ಜೊತೆಗೆ ಸಂಘ/ಸಂಸ್ಥೆಯವರು ಬೆಂಬಲ ನೀಡುವುದರ ಜೊತೆಗೆ ಇಂದು ಬೆಳಗಿನ ಜಾವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳಗದವತಿಯಿಂದ ಚಾಹ್ ಮತ್ತು ಬಿಸ್ಕೀಟು ಸೇವೆ ಕಲ್ಪಿಸಲಾಯಿತು. ಈ ದಿನದೊಂದು ವಿಶೇಷ ಹೋರಾಟ ಮಹಿಳೆಯರು ಭಾಗಿಯಾಗಿ, ಈ ಹೋರಾಟಕ್ಕೆ ಮೇರುಗು ನೀಡಿದರು. ಡಾ// ಅಂಬೇಡ್ಕರ ರವರು ನೀಡಿರುವ ಹಕ್ಕುಗಳನ್ನು ಬಳಸಿಕೊಂಡು ತಿನ್ನುವವರು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು,  ಅವಮಾನ ಮಾಡಿದ ನ್ಯಾಯ ದೀಶರನ್ನು ಈ ಕೂಡಲೆ ಅವರ ಹುದ್ದೆಯಿಂದ ಅಮಾನತು ಗೊಳಿಸಬೇಕು, ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಮ್ಮ ಮನದಾಳ ಮಾತನ್ನು ಆಕ್ರೋಶದ ಮೂಲಕ ವ್ಯಕ್ತ ಪಡಿಸಿದರು. ಸಮಾಜದ ಹಿತಾ ಚಿಂತಕರು ಈ ಉಪವಾಸ ಸತ್ಯಾಗ್ರಹದಲ್ಲಿ  ಭಾಗಿಯಾಗಿದ್ದರು. ಸಂಬಂದಪಟ್ಟ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಈ ಹೋರಾಟವು ಮುಂದಿನ ದಿನಮಾನಗಳಲ್ಲಿ ಕಠೀಣ ಉಪವಾಸ ಸಂತ್ಯಾಗ್ರಾಹ ಮುಂದುವರೆಯುತ್ತದೆ ಎಂದು ತಾವರಗೇರಾ ಪಟ್ಟಣದ ಸಂವಿಧಾನ ಹಿತಾ ರಕ್ಷಣಾ ಸಮೀತಿಯು ತೀರ್ಮಾನ ಕೈಗೊಂಡಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *