ಇನ್ನೊಂದು ಬೀಮಾ ಕೊರೆಗಾಂವ ಮಾಡಲಿಕ್ಕೆ ಬೀಡಬೇಡಿ….

Spread the love

ಇನ್ನೊಂದು ಬೀಮಾ ಕೊರೆಗಾಂವ ಮಾಡಲಿಕ್ಕೆ ಬೀಡಬೇಡಿ….

ಗೋಕಾಕ ತಾಲೂಕಿನ ದುಪಧಾಳ ಗ್ರಾಮದ ,ಚೆನ್ನಮ್ಮನಗರ ಎಂದು ಅಳವಡಿಸಲಾದ ನಾಮಪಲಕದಲ್ಲಿರುವ ಡಾ: ಅಂಬೇಡ್ಕರ ಮತ್ತು ಟಿಪ್ಪು ಸುಲ್ತಾನ ಭಾವ ಚಿತ್ರಕ್ಕೆ ಕೆಲವು ಕಿಡಿಗೇಡಿಗಳು ವಿಕೃತ  ಗೊಳಿಸಿದ್ದು ಇದನ್ನು ಖಂಡಿಸಿ ವಿವಿದ ದಲಿತಪರ ಸಂಘಟನೆಗಳು ಹಾಗೂ ಜೈ ಕರ್ನಾಟಕ ಸಂಘದ ನೇತೃತ್ವದಲ್ಲಿ ಘಟಪ್ರಭಾ ,ದುಪಧಾಲ ಮದ್ಯದ  ರಸ್ತೆ ತಡೆದು ಪ್ರತಬಟನೆ ಮಾಡಿ ವಿಕೃತ ಗೊಳಿಸಿದ ಕೀಡಿಗೇಡಿಗಳನ್ನು ಬಂದಿಸಲು ಪ್ರತಿಭಟನೆ ನಡೆಸಿದರು. ಈ ಪ್ರತಿಬಟನೆ ಉದ್ದೇಶಿಸಿ  ದಲಿತ ಮುಖಂಡ ಸಂತೋಷ ದೊಡಮನಿ ಮಾತನಾಡಿ ನಮ್ಮ ಹತ್ತಿರ ಬಾಬಾಸಹೇಬ ಸಾಹೇಬರ ಲೇಖನಿನೂ ಇದೆ ಟಿಪ್ಪು ಸುಲ್ತಾನರ ಖಡ್ಗವು ಇದೆ.ನಾವು ಎಲ್ಲದಕ್ಕೂ ರೇಡಿ ಇದೆ, ಇದೆ ರೀತಿ ಮುಂದುವರೆದರೆ ಇನ್ನೊಂದು ಭೀಮಾ ಕೊರೆಗಾಂವ ಆಗುತ್ತದೆ, ಅದಕ್ಕೆ ಅವಕಾಶ ಮಾಡಿಕೋಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂತೋಷ ದೊಡಮನಿ* ಈ ಪ್ರತಿಭಟನೆಯಿಂದ  ಸುಮಾರು ಅರ್ದ ಕಿಲೊ ಮಿಟರ ವರೆಗೂ ವಾಹನಗಳು ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಯಿತು. ನಂತರ ಕಿಡಿಗೇಡಿಗಳನ್ನು ಬಂದಿಸಲು ಪೋಲಿಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಯಲ್ಲಿ ಸುನೀಲ ಈರಗಾರ ಸಲೀಮ ಮುಲ್ಲಾ ಹಾಗೂ ಇನ್ನೂಳಿದ ದಲಿತಪರ ಸಂಘಟನೆಗಳ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಬಾಗಿಯಾಗಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *