ಕೂಡ್ಲಿಗಿ:ಅಗಸಗಟ್ಟೆ ತಿಂದಪ್ಪ- “ಕರುನಾಡ ಹರಿಕಾರಶ್ರೀ” –

Spread the love

ಕೂಡ್ಲಿಗಿ:ಅಗಸಗಟ್ಟೆ ತಿಂದಪ್ಪ– “ಕರುನಾಡ ಹರಿಕಾರಶ್ರೀ” –

ವಿಜಯನಗರ ಜಿಲ್ಲೆ ಕೂಡ್ಲಿಗಿ   ಪಟ್ಟಣದ ಯುವ ಪುರಾಣ ಪ್ರವಚನಕಾರ ಹಾಗೂ ರಂಗಕಲಾವಿದ ಅಗಸಗಟ್ಟೆ ತಿಂದಪ್ಪ ರವರಿಗೆ,ಮಂಡ್ಯ ಜಿಲ್ಲೆಯ ಕರುನಾಡ ಸೇವಾ ಟ್ರಸ್ಟ್ ಅ9ರಂದು  ಕರುನಾಡ ಹರಿಕಾರಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.  ಮಂಡ್ಯ ಜಿಲ್ಲೆಯ ಕರುನಾಡ ಸೇವಾ ಟ್ರಸ್ಟ್ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ, ವಿವಿದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ವಿವಿದ ಜಿಲ್ಲೆಗಳ ಗಣ್ಯಮಾನ್ಯರನ್ನು ಗುರುತಿಸಿ ಸನ್ಮಾನಿಸಿದೆ. ಟ್ರಸ್ಟ್‌ ವತಿಯಿಂದ ಗಣ್ಯಮಾನ್ಯರನ್ನು  ಕಾರ್ಯಕ್ರಮಕ್ಕೆ ಬರಮಾಡಿಕೊಂಡು, ಅವರನ್ನ ಸತ್ಕರಿಸಿ ಗೌರವ ಪೂರ್ವಕವಾಗಿ ಅಭಿನಂದಿಸಿದೆ.ತಿಂದಪ್ಪರ ಕಲಾ ಸೇವೆಯನ್ನ ಪರಿಗಣಿಸಿ ಅವರಿಗೆ ರಾಜ್ಯಮಟ್ಟದ “ಕರುನಾಡ  ಹರಿಕಾರಶ್ರೀ” ಪ್ರಶಸ್ತಿ ಗೌರವಿಸಿದೆ. ಅಕ್ಟೋಬರ್9ರಂದು ಮಂಡ್ಯದಲ್ಲಿ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ, ಪ್ರಶಸ್ತಿ ಪ್ರಧಾನ  ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಅಭಿನಂದನೆಗಳ ಮಹಾಪೂರ-  ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಿರಿಯ ರಂಗಕಲಾವಿದರು.ವಿವಿದ ಸಮುದಾಯಗಳ ಮುಖಂಡರು, ವಿವಿದ ಪಕ್ಷಗಳ ಪ್ರಮುಖರು, ವಿವಿದ  ಕಲಾವಿದರ ಸಂಘಟನೆಗಳ ಪ್ರಮುಖರು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ನಾಗರೀಕರು ಹಾಗೂ ಜನಪ್ರತಿನಿಧಿಗಳು,ಪ್ರಶಸ್ತಿ ಪಡೆದ ಯುವ ರಂಗಕಲಾವಿದ ಅಗಸಗಟ್ಟೆ ತಿಂದಪ್ಪರವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *