ಕೆ.ಆರ್.ಪೇಟೆ ತಾಲೂಕಿನ  ಬಡಜನರು ಹಾಗೂ ಶೋಷಿತವರ್ಗಕ್ಕೆ  ಬಿಜೆಪಿ ವತಿಯಿಂದ ಫುಡ್ ಕಿಟ್ ವಿತರಣೆ

Spread the love

ಕೆ.ಆರ್.ಪೇಟೆ ತಾಲೂಕಿನ  ಬಡಜನರು ಹಾಗೂ ಶೋಷಿತವರ್ಗಕ್ಕೆ  ಬಿಜೆಪಿ ವತಿಯಿಂದ ಫುಡ್ ಕಿಟ್ ವಿತರಣೆ

ಕೆ.ಆರ್.ಪೇಟೆ ತಾಲೂಕಿನ ಬಡಜನರು, ಶೋಷಿತರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ತಾಲೂಕು ಬಿಜೆಪಿ ವತಿಯಿಂದ ಫುಡ್ ಕಿಟ್ ಗಳನ್ನು ವಿತರಿಸಿ, ಬಿಜೆಪಿ ಮಂಡಲ ಅಧ್ಯಕ್ಷ ಪರಮೇಶ್ ಅರವಿಂದ್ ವಿತರಿಸಿದರು .ಕೋವಿಡ್ ಲಾಕ್ ಡೌನ್ ಸಂಕಷ್ಠದ ಹಿನ್ನೆಲೆಯಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ನೊಂದಿರುವ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಜನ ಸೇವೆ, ಕ್ರೀಡೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಕೊಡುಗೆಯಾಗಿ ನೀಡಿರುವ 10 ಸಾವಿರ ಫುಡ್ ಕಿಟ್ ಗಳನ್ನು ತಾಲ್ಲೂಕಿನಾಧ್ಯಂತ ವಿತರಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಬದ್ಧತೆಯಿಂದ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಠದ ಸಮಯದಲ್ಲಿ ದುಡಿಯುವ ವರ್ಗದ ಜನರು ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಭಾರತೀಯ ಜನತಾ ಪಕ್ಷದ ಆಶಯವಾಗಿದೆ ಎಂದು ಪರಮೇಶ್ ಅರವಿಂದ್ ಹೇಳಿದರು. ಕಳೆದ ಎರಡು ತಿಂಗಳಿನಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ತೊಂದರೆ ಅನುಭವಿಸುತ್ತಿರುವ  ತಾಲೂಕು ನಯನಜ ಕ್ಷತ್ರಿಯ ಸಮಾಜದ 300 ಕುಟುಂಬಗಳಿಗೆ  ಬಿಜೆಪಿ ಪಕ್ಷದ ವತಿಯಿಂದ ಫುಡ್ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಮೋದೂರು ಮಂಜುನಾಥ್, ಸಿದ್ಧರಾಜು, ಚೋಕನಹಳ್ಳಿ ಪ್ರಕಾಶ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ  ಲತಾಮುರಳಿ, ನಗರ ಬಿಜೆಪಿ ಮಹಿಳಾಧ್ಯಕ್ಷೆ ಚಂದ್ರಕಲಾ ರಮೇಶ್, ಉಧ್ಯಮಿ ಸಂತೋಷ್, ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.ವರದಿ ಸಂಗ್ರಹಗಾರರು .ಡಾ.ಕೆ.ಆರ್.ನೀಲಕಂಠ .

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *