ಸೋಮವಾರ ದಂದು ಮಾಜಿ ಸಚಿವ ರಾಯರಡ್ಡಿ ಅವರಿಂದ ಯಲಬುರ್ಗಾ ಮತ್ತು ಕುಕನೂರು ತಾಲೂಕಿಗೆ 10500 ಕಿಟ್ ವಿತರಣೆ

Spread the love

ಸೋಮವಾರ ದಂದು ಮಾಜಿ ಸಚಿವ ರಾಯರಡ್ಡಿ ಅವರಿಂದ ಯಲಬುರ್ಗಾ ಮತ್ತು ಕುಕನೂರು ತಾಲೂಕಿಗೆ 10500 ಕಿಟ್ ವಿತರಣೆ

ಯಲಬುರ್ಗಾ : ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ ಅವರು ಪತ್ರಕರ್ತರಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದರು  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವತಿಯಿಂದ ಸೋಮವಾರ ಮದ್ಯಾಹ್ನ 1:00 ಗಂಟೆಗೆ ಕುಕನೂರ ಮತ್ತು ಯಲಬುರ್ಗಾ ತಾಲ್ಲೂಕಿನ 10500 ಸಾವಿರ ಬಡವರಿಗೆ ಆಹಾರಧಾನ್ಯದ ಕಿಟ್ ವಿತರಣೆ ಮಾಡಲು ಬರುತ್ತಿದ್ದಾರೆ ದೇಶದಲ್ಲಿ ಎರಡನೇ ಅಲೆ ಕೊರೋನ ಸಂಕಷ್ಟದಲ್ಲಿ ಸಿಲುಕಿರುವ ಬಡವರಿಗೆ ಹಾಗೂ ತಮ್ಮ ಜೀವದ ಭಯವನ್ನು ಮರೆತು ಪ್ರತಿಯೊಂದು ಸುದ್ದಿಗಾಗಿ ಹಗಲು-ರಾತ್ರಿಯೆನ್ನದೆ ದುಡಿಯುತ್ತಿರುವ ಪತ್ರಕರ್ತರಿಗೆ ಅದೊಂದು ದೊಡ್ಡ ಸಾಧನೆ ಸರ್ಕಾರದಿಂದ ಪತ್ರಕರ್ತರಿಗೆ ಯಾವುದೇ ಪ್ಯಾಕೇಜ್  ಘೋಷಿಸಿಲ್ಲ?  ಕರ್ನಾಟಕ ಸರ್ಕಾರ ಪತ್ರಕರ್ತರ ಸೇವೆ ಗುರುತಿಸಿ ಪತ್ರಕರ್ತರ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳನ್ನು ತಾಯಿಗೆ ಘೋಷಣೆ ಮಾಡಬೇಕು ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ ಎಂ ಸಿರೂರ್ ರಾಮಣ್ಣ ಸಾಲಬಾವಿ ರೇವಣಪ್ಪ ಹಿರೇಕುರುಬರ ಬಸುವರಾಜ್ ಕುಡಗುಂಟಿ ಬಸವರಾಜ ಪೂಜಾರ್ ರಾಜಶೇಖರ್ ನಿಂಗೋಜಿ ಡಾಕ್ಟರ್ ಶಿವನಗೌಡ ದಾನರೆಡ್ಡಿ ಇನ್ನಿತರರು ಮುಖಂಡರು ಭಾಗಿಯಾಗಿದ್ದರು

 ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *