ಕೂಡ್ಲಿಗಿ ಪಟ್ಟಣದಲ್ಲಿ ಜನ ವಿರೋಧಿ ನೀತಿ ಹಿಂಪಡೆಯುವಂತೆ ಸಿಪಿಐ ಒತ್ತಾಯ

Spread the love

ಕೂಡ್ಲಿಗಿ ಪಟ್ಟಣದಲ್ಲಿ ಜನ ವಿರೋಧಿ ನೀತಿ ಹಿಂಪಡೆಯುವಂತೆ ಸಿಪಿಐ ಒತ್ತಾಯ

-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ರಾಜ್ಯ ಹಾಗೂ ಕೇಂದ್ರ ಜನ ವಿರೋಧಿ ನೀತಿ ಖಂಡಿಸಿ ,ಭಾರತ ಕಮ್ಯೂನಿಸ್ಟ್ ಕಾರ್ಯಕರ್ತರು ಸೂಕ್ತ ಕ್ರಮಕ್ಕೆ  ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಮಾಡಿದ್ದು ಮನವಿಯನ್ನು ಶಾಸಕರ ಆಪ್ತ ಸಹಾಯಕರಿಗೆ ನೀಡಲಾಯಿತು, ಭಾರತ ಕಮ್ಯೂನಿಸ್ಟ್ ಪಕ್ಷದ  ಕಾರ್ಯಕರ್ತರು ಕಾರ್ಯದರ್ಶಿ ಹೆಚ್.ವೀರಣ್ಣ ನವರ ನೇತೃತ್ವದಲ್ಲಿ. ಶಾಸಕರ ಕಚೇರಿ ಆವರಣದ ಹತ್ತಿರ ತೆರಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ನಂತರ ಶಾಸಕರ ಆಪ್ತ ಸಹಾಯಕ ಶ್ರೀಕಾಂತರಿಗೆ ಮನವಿ ಪತ್ರ ನೀಡಿದರು.ಮುಖಂಡ ಯು.ಪೆನ್ನಪ್ಪ ಸೇರಿದಂತೆ ಅನೇಕ ಮುಖಂಡರು ಕಾರ್ತಕರ್ತರು ಇದ್ದರು.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *