ಲಿಂಗಸೂಗೂರ ಶಾಸಕರ ಕಛೇರಿ ಮುಂದೆ ಎಡಪಕ್ಷಗಳ ಪ್ರತಿಭಟನೆ

Spread the love

ಲಿಂಗಸೂಗೂರ ಶಾಸಕರ ಕಛೇರಿ ಮುಂದೆ ಎಡಪಕ್ಷಗಳ ಪ್ರತಿಭಟನೆ

ಎಡ ಪ್ರಜಾಸತ್ತಾತ್ಮಕ ಪಕ್ಷಗಳ ನೇತೃತ್ವದಲ್ಲಿ ಇಂದು ಲಿಂಗಸ್ಗೂರ ಕ್ಷೇತ್ರದ ಶಾಸಕ ಡಿ.ಎಸ್.ಹೂಲಿಗೇರಿ ಅವರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಕೋವಿಡ್ ಹಾಗೂ ಲಾಕ್ ಡೌನ್ ಗಳ ದುಸ್ಥಿತಿಗೆ ಪರಿಹಾರಗಳ ಸಮರ್ಪಕ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ರಮೇಶ ವೀರಾಪೂರು, ಮಹ್ಮದ್ ಹನೀಫ್, ಸಿಪಿಐ ನ ವೆಂಕೋಬ್ ಮಿಯ್ಯಾಪೂರು, ಎಸ್ ಯುಸಿಐ ಮುಖಂಡ, ಶರಣಪ್ಪ ಉದ್ಬಾಳ, ಎಂಎಲ್ ಪಿಐ (ರೆಡ್ ಸ್ಟಾರ್) ಮುಖಂಡ ಬಿ ಬಸಲಿಂಗಪ್ಪ ನಗನೂರು, ಸಿಪಿಐಎಂ ಮುಖಂಡರಾದ ಮಾನಪ್ಪ ಲೆಕ್ಕಿಹಾಳ, ಸದ್ದಾ ಹುಸೇನ್, ಹನುಮಂತ ಕಟ್ಟಿಮನಿ, ನಿಂಗಪ್ಪ ಪಾನ್ ಶಾಪ್, ಶಿವರಾಜ್ ಕಪಗಲ್, ಬೆಟ್ಟಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *