ಹನುಮ ಜಯಂತಿ ದಿನವೇ ಹುಬ್ಬಳ್ಳಿಯಲ್ಲಿ ಅಂಜನಿ ಪುತ್ರನ ಕಣ್ಣಿಂದ ಜಿನುಗಿದ ನೀರು : ದೇವರ ಪವಾಡಕ್ಕೆ ಭಕ್ತರ ಅಚ್ಚರಿ…..

Spread the love

ಹನುಮ ಜಯಂತಿ ದಿನವೇ ಹುಬ್ಬಳ್ಳಿಯಲ್ಲಿ ಅಂಜನಿ ಪುತ್ರನ ಕಣ್ಣಿಂದ ಜಿನುಗಿದ ನೀರು : ದೇವರ ಪವಾಡಕ್ಕೆ ಭಕ್ತರ ಅಚ್ಚರಿ…..

ಅಂಜನಿ ಪುತ್ರನ ಕಣ್ಣಿಂದ ಜಿನುಗಿದ ನೀರು ಇತಿಹಾಸ ಪ್ರಸಿದ್ಧ ಪ್ರಾಣ ಹನುಮ ದೇವಸ್ಥಾನದಲ್ಲಿ ಘಟನೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರುವ ದೇಗುಲ ಹನುಮ ಜಯಂತಿ ದಿನವೇ ಧಾರಾವಾಡ ಜಿಲ್ಲೆಯಲ್ಲಿ ಆಂಜನೇಯ ಮೂರ್ತಿಯಲ್ಲಿನ ಕಣ್ಣಲ್ಲಿ ನೀರು ಹಾಕಿದ ಅಚ್ಚರಿಯ ಘಟನೆ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರೋ ದೇವಸ್ಥಾನದಲ್ಲಿ ಈ ರೀತಿ ದೈವ ಪವಾಡದ ಘಟನೆ ನಡೆದಿದೆ. ಹೌದು, ಇತಿಹಾಸ ಪ್ರಸಿದ್ಧ ಪ್ರಾಣ ಹನುಮ ದೇವಸ್ಥಾನದಲ್ಲಿ ಈ ರೀತಿಯಾದ ಘಟನೆಗೆ ಇಡೀ ಗ್ರಾಮಕ್ಕೆ ಗ್ರಾಮವೇ ಚಕಿತ ಗೊಂಡಿದ್ದು, ಹನುಮನ ಮೂರ್ತಿಯಿಂದ ಕಣ್ಣೀರು ಜಿನಿಗುತ್ತಿರೋದಕ್ಕೆ ಎಲ್ಲಾ ಗ್ರಾಮಸ್ಥರು ಬಹಳ ಆಶ್ಚರ್ಯದಿಂದ ದೇವಸ್ಥಾನದತ್ತ ಮುಖಮಾಡಿದ್ದಾರೆ. ಇನ್ನು, ಈ ಆಂಜನೇಯ ದೇವಸ್ಥಾನ ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದು, ಜಕಣಾಚಾರಿ ಗುಡಿಯನ್ನು ಕಟ್ಟಿದ್ದಾರೆಂಬ ನಂಬಿಕೆ ಗ್ರಾಮಸ್ಥರಾಗಿದೆ. ಪ್ರತಿ ವರ್ಷ ಹನುಮ ಜಯಂತಿ ದಿನದಂದು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿತ್ತು.ಅದರಂತೆ ಈ ವರ್ಷವು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗಿತು. ನಂತರ ಆಂಜನೇಯನಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಕಣ್ಣೀಂದ ನೀರು ಜಿಗುಗಲು ಶುರುವಾಗಿದೆ. ಇದನ್ನು ಕಂಡ ಅರ್ಚಕರು ಆಶ್ಚರ್ಯಗೊಂಡು ಸ್ಥಳೀಯ ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಆ ಬಳಿಕ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೇನಿ ಇರಲಿ ರಾಜ್ಯಾದ್ಯಂತ ಎಲ್ಲರು ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ವೇಳೆ ಬುಡರಸಿಂಗಿ ಹನುಮ ಕಣ್ಣೀರು ಹಾಕಿದ್ದು ಮಾತ್ರ ಭಕ್ತರಲ್ಲಿ ಆತಂಕ ಮೂಡಿಸಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *