ಸಿರುಗುಪ್ಪ:ಹಳೆ ವಿದ್ಯಾರ್ಥಿ ಇಂದ ಅನ್ನದಾಸೋಹ,,

Spread the love

ಸಿರುಗುಪ್ಪ:ಹಳೆ ವಿದ್ಯಾರ್ಥಿ ಇಂದ ಅನ್ನದಾಸೋಹ,,

ಸಿರುಗುಪ್ಪ ತಾಲ್ಲೂಕಿನ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಸಿದ್ಧಗಂಗಾ ಭಕ್ತ ಬಳಗದಿಂದ ನಡೆದಾಡುವ ದೇವರು ತ್ರಿವಿಧ ದಾಸೋಹಿ ಡಾ ಶ್ರೀ ಶ್ರೀ ಶ್ರೀ  ಶಿವಕುಮಾರಸ್ವಾಮೀಜಿಗಳು ಅವರ 115 ಜನ್ಮ ಜನ್ಮದಿನೋತ್ಸವ  ಕಾರ್ಯಕ್ರಮ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಸಿರುಗುಪ್ಪ ತಾಲ್ಲೂಕಿನಲ್ಲಿರುವ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ನಗರದ ಕೆಇಬಿ ಗಣೇಶ ದೇವಸ್ಥಾನದ ಆವರಣದಲ್ಲಿ  ಶ್ರೀಗಳ ಭಾವಚಿತ್ರಕ್ಕೆ ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಅಭಿನವ ಮಹಾಂತ ಶ್ರೀ ಸ್ವಾಮಿಗಳು ಹಾಗು ಹಳೇಕೋಟೆ ಮರಿತಾತ ಮಠದ ಪೀಠಾಧ್ಯಕ್ಷ ರಾದ ಸಿದ್ಧಬಸವ ಶ್ರೀಗಳು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು ನಂತರ  ಮೆರವಣಿಗೆಯಲ್ಲಿ  ಕಲಾತಂಡಗಳು ನಂದಿಕೋಲು ವಾದ್ಯಮೇಳಗಳ ಮೂಲಕ ಸಹಸ್ರಾರು ಭಕ್ತರು ಸೇರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ನಂತರ ವ್ಯಾಯಾಮ ಶಾಲೆ ಆವರಣದಲ್ಲಿ ಅನ್ನದಾಸೋಹ ನಡೆಯಿತು ಕಾರ್ಯಕ್ರಮಕ್ಕೆ ತಾಲ್ಲೂಕಿನ ನಾನಾ ಹಳ್ಳಿಗಳಿಂದ ಬಂದ ಹಾಗೂ ನಗರದ ನೂರಾರು ಭಕ್ತರು ಹಾಗೂ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ವೇಳೆ ಮಾಜಿ ಶಾಸಕ ಟಿ ಚಂದ್ರಶೇಖರ ಸ್ವಾಮಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ತೆಕ್ಕಲಕೋಟೆ ಜ್ಞಾನಾನಂದ ಸ್ವಾಮಿ ಲಾಳಗೊಂಡ ಸಮಾಜದ ಅಧ್ಯಕ್ಷ ಆರ್ ಸಿ ಪಂಪನಗೌಡ ಸೇರಿದಂತೆ ಮಠದ ವಿದ್ಯಾರ್ಥಿಗಳು ಹಾಗೂ ಭಕ್ತಾದಿಗಳು ಇದ್ದರು.

ವರದಿ – ಬಾಲರಾಜ ಯಾದವ್

Leave a Reply

Your email address will not be published. Required fields are marked *