ಸಕ್ಷಮ ಸಂಸ್ಥೆ ಜಿಲ್ಲಾ ಘಟಕ. ಶಿವಮೊಗ್ಗದ ವತಿಯಿಂದ ದಿವ್ಯಾಂಗರ ಮಾಹಿತಿ ಸಂಗ್ರಾಹಣದ ಅಭಿಯಾನದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Spread the love

ಸಕ್ಷಮ ಸಂಸ್ಥೆ ಜಿಲ್ಲಾ ಘಟಕ. ಶಿವಮೊಗ್ಗದ ವತಿಯಿಂದ ದಿವ್ಯಾಂಗರ ಮಾಹಿತಿ ಸಂಗ್ರಾಹಣದ ಅಭಿಯಾನದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

11/04/2022 ಸೋಮವಾರ ಇವತ್ತು ಸಾಮರ್ಥ್ಯ ಸೌಧ ತಾಲ್ಲೂಕು ಪಂಚಾಯಿತಿ ಹಿಂಭಾಗ ಆವರಣ ಸಾಗರ ತಾಲ್ಲೂಕಿನಲ್ಲಿ ಸಕ್ಷಮ ಸಂಸ್ಥೆ ಜಿಲ್ಲಾ ಘಟಕ. ಶಿವಮೊಗ್ಗದ ವತಿಯಿಂದ ದಿವ್ಯಾಂಗರ ಮಾಹಿತಿ ಸಂಗ್ರಾಹಣದ ಅಭಿಯಾನದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದರಲ್ಲಿ ಸಾಗರ ತಾಲ್ಲೂಕಿನ ಎಮ್. ಆರ್.ಡಬ್ಲ್ಯೂ (ವಿವಿದ್ದೋದೇಶ ಪುನರ್ವಸತಿ ಕಾರ್ಯಕರ್ತರು) , ವಿ.ಆರ್.ಡಬ್ಲ್ಯೂ ( ಗ್ರಾಮೀಣ ಪುನರ್ವಸತಿ ಪುನರ್ವಸತಿ S ಕಾರ್ಯಕರ್ತರು ) , ಯು.ಆರ್.ಡಬ್ಲ್ಯೂ (ನಗರ ಕಾರ್ಯಕರ್ತರು ) ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಸಕ್ಷಮ ಸಂಸ್ಥೆ ಜಿಲ್ಲಾ ಘಟಕ ಶಿವಮೊಗ್ಗದ ಬಗ್ಗೆ ಪರಿಚಯವನ್ನು ನೀಡುವುದರ ಜೊತೆಯಲ್ಲಿ ಈ ಹಿಂದೆ ವಿಶೇಷಚೇತನರಿಗಾಗಿ ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ಮತ್ತು ಮುಂದೆ ನಡೆಯಬೇಕಾದ ಹಾಗೂ ಆಗಬೇಕಾದ ಕೆಲಸಕಾರ್ಯಗಳ ಬಗ್ಗೆ ವಿವರಿಸಲಾಯಿತು . ಜೊತೆಯಲ್ಲಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ವಿಶೇಷಚೇತನರ ಕುಂದುಕೊರತೆಗಳ ಬಗ್ಗೆ ಮಾಹಿತಿಯನ್ನು ಪಡೆದು , ಜೊತೆಯಲ್ಲಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿಕೊಡುವುದರ ಜೊತೆಯಲ್ಲಿ ಸರ್ಕಾರದಿಂದ ವಿಶೇಷಚೇತನರಿಗಾಗಿಯೇ ಮಾನ್ಯತೆಯನ್ನು ಪಡೆದಂತಹ 2016 ರ ಆರ್.ಪಿ.ಡಿ ಆಕ್ಟ್ ಬಗ್ಗೆ ತಿಳಿಸಿ.ನಮ್ಮ ಸಕ್ಷಮ ಸಂಸ್ಥೆಯ ವತಿಯಿಂದ ಆಯೋಜನೆಗೊಂಡ ಕೆಲ ಸೌಲಭ್ಯಗಳ ಮಾಹಿತಿಯನ್ನು ದಿವ್ಯಾಂಗ ಮಾಹಿತಿ ಸಂಗ್ರಾಹಣ ಅಭಿಯಾನದ ಮೂಲಕ ತಿಳಿಸಲಾಯಿತು . ಸಕ್ಷಮ ಭಾರತ್ .. ಸಮರ್ಥ್ ಭಾರತ್

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *