ಬಸವಲಿಂಗ ಪಟ್ಟದೇವರಿಗೆ ಒಲಿದ ಚುಟುಕು ತಪಸ್ವಿ ಪ್ರಶಸ್ತಿ.
ಚಿಟಗುಪ್ಪಾ : ಕಚುಸಾಪ ದಶಮಾನೋತ್ಸವ ಸಂಭ್ರಮದ ಅಂಗವಾಗಿ 2021- 22 ಸಾಲಿನ “ಚುಟುಕು ತಪಸ್ವಿ” ಪ್ರಶಸ್ತಿಯನ್ನು ಈ ಬಾರಿ ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು, ಸಾಹಿತಿಗಳು, ವೈಚಾರಿಕ ಚಿಂತಕರು, ಪ್ರಗತಿಪರ ವಿಚಾರಧಾರೆಯ ಚೈತನ್ಯ ಮೂರ್ತಿಗಳು,ಅನುಭವ ಮಂಟಪದ ಅಧ್ಯಕ್ಷರು,ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಮಹಾಸ್ವಾಮಿಗಳಿಗೆ ಆಯ್ಕೆ ಮಾಡಲಾಗಿದೆ. ಇದೆ ತಿಂಗಳು 12 ತಾರೀಖಿನಂದು ಬೆಂಗಳೂರಿನ ವನಕಲ್ಲು ಮಠದ ಬೃಹತ್ ಸಭಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾ ಮಠದ ಪೂಜ್ಯ ಶಿವಮೂರ್ತಿ ಶರಣರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಎಂದು ರಾಜ್ಯ ಸಂಚಾಲಕರು ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ಬೀದರ ಜಿಲ್ಲಾಧ್ಯಕ್ಷ ಸಂಗಮೇಶ ಎನ್ ಜವಾದಿಯವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವರದಿ – ಸಂಗಮೇಶ ಎನ್ ಜವಾದಿ