ಕುಷ್ಟಗಿ ತಾಲ್ಲೂಕಿನ  ಅಧಿಕಾರಿಗಳ  ಚಿತ್ತ  ಕರೋನ  ಹೆಚ್ಚಾಗುತ್ತಿರುವ  ಹಳ್ಳಿ ಗಳತ್ತ

Spread the love

ಕುಷ್ಟಗಿ ತಾಲ್ಲೂಕಿನ  ಅಧಿಕಾರಿಗಳ  ಚಿತ್ತ  ಕರೋನ  ಹೆಚ್ಚಾಗುತ್ತಿರುವ  ಹಳ್ಳಿ ಗಳತ್ತ

ಕೊಪ್ಪಳ  ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ  ಬರುವ ದೋಟಿಹಾಳ  ಮುದೇನೂರ  ಮಾದಾಪುರ  ಬೆಂಚಮಟ್ಟಿ  ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕರೋನ ಪಾಸಿಟಿವ್  ಪ್ರಕರಣಗಳು ಹೆಚ್ಚಾಗುತ್ತಿರುವ  ಹಿನ್ನೆಲೆಯಲ್ಲಿ  ಕುಷ್ಟಗಿ ತಾಲ್ಲೂಕಿನ  ಶ್ರೀ ಮಾನ್ಯ ತಹಶೀಲ್ದಾರರಾದ ಎಂ ಸಿದ್ದೇಶ ಸಾಹೇಬರು ತಾಲೂಕಿನ ಆರೋಗ್ಯ  ಅಧಿಕಾರಿಗಳಾದ  ಶ್ರೀ ಮಾನ್ಯ ಆನಂದ ಗೋಟುರು ತಾಲ್ಲೂಕು ಪಂಚಾಯಿತಿ ಸಹಾಯಕ  ನಿರ್ದೇಶಕರಾದ ಶ್ರೀ ಮಾನ್ಯ ವೆಂಕಟೇಶ್ ವಂದಾಲಿ  ಸಾಹೇಬರು   ಇವರೆಲ್ಲರೂ ಜೋತೆಯಾಗಿ. ಹಳ್ಳಿಗಳಲ್ಲಿ ಕರೋನ ಪಾಸಿಟಿವ್ ಹೆಚ್ಚಾಗುತ್ತಿರುವ ಪ್ರತಿಯೊಂದು ಮನೆ ಮನೆಗೆ ತೆರಳಿ  ಸೊಂಕಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ  ಈ ರೋಗದ ಬಗ್ಗೆ ಜಾಗೃತಿ ಮೂಡಿಸಿ  ಈ ರೋಗದ ಬಗ್ಗೆ ಜನರಲ್ಲಿ ಅರಿವು  ಮೂಡಿಸುವ ಕೆಲಸವನ್ನು ಮಾಡಿದರು  ಜೊತೆಗೆ ಮಾನ್ಯ ತಹಶೀಲ್ದಾರ ಸಾಹೇಬರು ಪ್ರತಿಯೊಂದು ಮನೆ ಮನೆಗೆ ತೆರಳಿ  ಪ್ರಾಥಮಿಕ ಸಂಪರ್ಕಿತರನ್ನು  ತಿವ್ರವಾಗಿ ಪತ್ತೆ  ಹಚ್ಚಿ ಎಂದು ಸ್ಥಳೀಯ ವೈದ್ಯಾಧಿಕಾರಿಗಳಿಗೆ ತಿಳಿಸಿದರು ಈ ಸಂದರ್ಭದಲ್ಲಿ  ಸ್ಥಳೀಯ ಪ್ರಾಥಮಿಕ ವೈದ್ಯಾಧಿಕಾರಿಗಳಾದ  ಡಾ ನಿಲಪ್ಪ ಹಾಗೂ ಗ್ರಾಮಗಳ  ಪಂ ಅಭಿವೃದ್ಧಿಗೆ ಅಧಿಕಾರಿಗಳು  ತಾಲ್ಲೂಕಿನ  ಅಧಿಕಾರಿಗಳ  ಜೋತೆ  ಗೂಡಿ  ಜನರಲ್ಲಿ  ಜಾಗೃತಿ   ಮೂಡಿಸಿದರು. ಸರ್ಕಾರದ ಆದೇಶದಂತೆ ಎಲ್ಲರೂ ಸರಕಾರ ನಿಯಮ ಪಾಲನೆ ಮಾಡಬೇಕು ಎಂದರು. ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ   ಆಶಾ ಕಾರ್ಯಕರ್ತೆಯರನ್ನು ಬೇಟೆ ಮಾಡಿ ತಮ್ಮ ಆರೋಗ್ಯದ ಬಗ್ಗೆ ಮುಕ್ತವಾಗಿ ವಿಚಾರಿಸಿ ಸಲಹೆ ಪಡೆಯಿರಿ ಎಂದರು. ಈ ಸಂದರ್ಭದಲ್ಲಿ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಶಾ  ಕಾರ್ಯಕರ್ತೆಯರು ಭಾಗಿಯಾಗಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *