ಐ.ಪ.ಎಲ್.ದಂಧೆಗೆ ಬಿತ್ತು ಬ್ರೇಕ್ ತಾವರಗೇರಾ ಪೊಲೀಸರಿಂದ ಮೂವರು ಬಂಧನ.

Spread the love

ಐ.ಪ.ಎಲ್.ದಂಧೆಗೆ ಬಿತ್ತು ಬ್ರೇಕ್ ತಾವರಗೇರಾ ಪೊಲೀಸ್ ಇಲಾಖೆಯಿಂದ ಮೂವರು ಬಂಧನ.

ಇಡಿ ರಾಜ್ಯವೆ ಕರೋನದ ಗುಂಗಲ್ಲಿ ಮುಳಿಗಿದರೆ. ನಮ್ಮ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಯುವಕರು ಐ.ಪಿ.ಎಲ್. ದಂಧೆಯಲ್ಲಿ ಮುಳಿಗಿದ್ದಾರೆ. ಇತ್ತ ಸರಕಾರ ಈ ಕರೋನದಿಂದ ಸಾರ್ವಜನೀಕರು ಆರೋಗ್ಯದಿಂದ ಬದುಕು ಸಾಗಿಸಿದರೆ ಸಾಕು ಅನ್ನುವಷ್ಠರ ಮಟ್ಟಿಗೆ ತಲೆ ಬಿಸಿ ಮಾಡಿಕೊಂಡು ಕ್ಷಣ ಕ್ಷಣಕ್ಕೂ ಸುದ್ದಿ ನೋಡುತ್ತ ಕುಳಿತಿದೆ, ಇತ್ತ ನಮ್ಮ ಜಿಲ್ಲೆಯಲ್ಲಿ ಕೆಲವು ಯುವಕರು ಯಾವುದೇ ಚಿಂತೆವಿಲ್ಲದೆ ಐ.ಪಿ.ಎಲ್. ಬೆಟ್ಟಿಂಗ್ ದಂಧೆಗೆ ಮಾರು ಹೋಗುತ್ತಿದ್ದಾರೆ. ಮನೆಯಲ್ಲಿ ಜೀವನ ಹೇಗೆ ಸಾಗುತ್ತಿದೆ ಎಂಬ ಪರೀಜ್ಞಾನವೇ ಇಲ್ಲದೆ ಇಂತಹ  ಅಕ್ರಮದಂಧೆಯಲ್ಲಿ ಭಾಗಿಯಾಗಿ ಯುವಕರು ಒಂದು ಕಡೆ ಜೀವನೆ ನಾಶ ಗೋಳಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಯುವಕರು ನಶೆಗೆ ಹೊಂದು ಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಟ್ಟಾರೆ ತಾವರಗೇರಾ ಪಟ್ಟಣದ ಮಾನ್ಯ ಪಿ.ಎಸ್.ಐ ಗೀತಾಂಜಲಿ ಶಿಂಧೇಯವರು ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತಾರೆ . ತಾವರಗೇರಾ ಪಟ್ಟಣದ ಯುವಕರು ಐ.ಪಿ.ಎಲ್. ಬೆಟ್ಟಿಂಗ್ ದಂಧೆಯಲ್ಲಿ ಪಳಗಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೇದು ಪಟ್ಟಣದ ಮೂರು ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನಾಂಕ 28/04/2021 ರಂದು ರಾತ್ರಿ ಐ.ಪಿ.ಎಲ್. ಜೂಜಾಟದಲ್ಲಿ ಭಾಗಿಯಾದ ಶಿವನಗೌಡ ಪುಂಡಗೌಡ್ರ, ಪ್ರೇಮ್ ರಜಪೂತ ಹಾಗೂ ರವಿಚಂಧ್ರ ಬನ್ನಿಕಟ್ಟಿ ಇವರೆಲ್ಲ ಬಂಧಿತರು. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ  ಸಂಖ್ಯೆ 49/2021 ದಾಖಲಿಸಿಕೊಂಡ ಪಿ.ಎಸ್.ಐ. ಗೀತಾಂಜಲಿ ಶಿಂದೇ ತನಿಖೆ ಕೈಗೊಂಡಿದ್ದಾರೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *