ವಿದ್ಯಾರ್ಥಿಗಳಿಗೆಂದು ನೀಡಿದ್ದ ಲ್ಯಾಪ್‌ಟಾಪ್ ತೆಗೆದುಕೊಂಡ ಶಿಕ್ಷಕರಿಗೆ ಚೀಮಾರಿ ಹಾಕಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಜಯಶ್ರಿ.

Spread the love

ವಿದ್ಯಾರ್ಥಿಗಳಿಗೆಂದು ನೀಡಿದ್ದ ಲ್ಯಾಪ್‌ಟಾಪ್ ತೆಗೆದುಕೊಂಡ ಶಿಕ್ಷಕರಿಗೆ ಚೀಮಾರಿ ಹಾಕಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಜಯಶ್ರಿ.

ಹಟ್ಟಿಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನೂಕೂಲಕ್ಕಾಗಿ ಸ್ವಂತ ಉಪಯೋಗಕ್ಕೆಂದು ಇಂಟೆಕ್ ಇಂಡಿಯಾ ಸಂಸ್ಥೆ ಹಾಗೂ ಹಟ್ಟಿ ಚಿನ್ನದ ಗಣಿಯಿಂದ 40 ಲ್ಯಾಪ್‌ಟಾಪ್ ಗಳನ್ನು ದಾನವಾಗಿ ನೀಡಿತ್ತು. ಆದರೆ 30 ಲ್ಯಾಪ್‌ಟಾಪ್ ಗಳನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿ,  10 ಲ್ಯಾಪ್‌ಟಾಪ್ ಗಳನ್ನು ಶಿಕ್ಷಕರು ಹಂಚಿಕೊಂಡಿದ್ದರು. ಈ ಬಗ್ಗೆ ಎಸ್ಎಫ್ಐ ದೂರು ನೀಡಿದಾಗಲೂ ಬಿಇಓ ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ಶಿಕ್ಷಕರ ತಪ್ಪನ್ನು ಮುಚ್ಚಿಹಾಕಿದ್ದರು.ಇತ್ತೀಚೆಗೆ ಮಕ್ಕಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷೆ ಡಾ.ಜಯಶ್ರೀ ಶಾಲೆಗೆ ಭೇಟಿ ನೀಡಿ ಶಿಕ್ಷಕರಿಗೆ ಚೀ ಮಾರಿ ಹಾಕಿ, ಶಿಕ್ಷಕರು ತೆಗೆದುಕೊಂಡಿದ್ದ ಲ್ಯಾಪ್‌ಟಾಪ್ ಗಳನ್ನು ಮಕ್ಕಳಿಗೆ ನೀಡಲು ಸೂಚಿಸಿದ್ದಾರೆ. ಈ ಬಗ್ಗೆ ಮುಖ್ಯಗುರು ಮುರುಳೀಧರ ರಾವ್ ಕುಲಕರ್ಣಿ ಅವರಿಗೆ ಪಾಲಕರು ಹಾಗೂ ಎಸ್ಎಫ್ಐ, ಸಿಐಟಿಯು ಸಂಘಟನೆಯ ಕಾರ್ಯಕರ್ತರು ಪ್ರಶ್ನಿಸಿದಾಗ ತಪ್ಪು ಮಾಹಿತಿ ನೀಡಿ ನುಣಿಚಿಕೊಳ್ಳುತ್ತಾ ಬಂದಿದ್ದರು. ನಿನ್ನೆ ಶಿಕ್ಷಕರು ತೆಗೆದುಕೊಂಡ 9 ಲ್ಯಾಪ್‌ಟಾಪ್ ಗಳನ್ನು  ವಿದ್ಯಾರ್ಥಿಗಳಿಗೆ ನೀಡಲಾಗಿದೆ.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಥೋಡ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಮಹಮ್ಮದ್ ಹನೀಫ್, ಎಸ್ಡಿಎಂಸಿ ಸದಸ್ಯರಾದ ಅಬ್ದುಲ್ ರಫಿ, ದಾವೂದ್, ಪ್ರಹ್ಲಾದ್ ಸೇರಿದಂತೆ ಅನೇಕರು ಇದ್ದರು.

ವರದಿ – ಮಹೇಶ ಶರ್ಮಾ ಅಥಣಿ

Leave a Reply

Your email address will not be published. Required fields are marked *