ಕೂಡ್ಲಿಗಿ:ನ್ಯಾಯಾಧೀಶರನ್ನ ವಜಾಗೊಳಿಸಿ ವಕೀಲರ ಆಗ್ರಹ…

Spread the love

ಕೂಡ್ಲಿಗಿ:ನ್ಯಾಯಾಧೀಶರನ್ನ ವಜಾಗೊಳಿಸಿ ವಕೀಲರ ಆಗ್ರಹ

ವಿಜಯನಗರ ಜಿಲ್ಲೆ ಕೂಡ್ಲಿಗಿ,ನ್ಯಾಯಾಧೀಶ ಅಂಬೇಡ್ಕರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಕೂಡ್ಲಿಗಿ ವಕೀಲ ಸಂಘದ ಪದಾಧಿಕಾರಿಗಳು ಖಂಡಿಸಿದ್ದಾರೆ. ವಕೀಲರ ಸಂಘದ ಅಧ್ಯಕ್ಷರಾದ ಜಿ.ಹೊನ್ನೂರಪ್ಪರವರ ನೇತೃತ್ವದಲ್ಲಿ ತಹಶಿಲ್ದಾರರಿಗೆ ಮನವಿ ಪತ್ತ ನೀಡಿದ್ದಾರೆ,ಈ ಮೂಲಕ ನ್ಯಾಯಾಧೀಶನ ವಿರುದ್ಧ ಶಿಸ್ತು ಕ್ರಮಕ್ಕೆ ಅವರು ರಾಜ್ಯಪಾಲರಲ್ಲಿ ಒತ್ತಾಯಿಸಿದ್ದಾರೆ. ಜಿ.ಹೊನ್ನೂರಪ್ಪ ಮಾತನಾಡಿ,ಜನವರಿ 26ರಂದು ನಡೆದ ಗಣರಾಜ್ಯೋತ್ಸವದಂದು, ಜಿಲ್ಲಾ ನ್ಯಾಯಮೂರ್ತಿ ಮಲ್ಲಿಕಾರ್ಜುನಗೌಡ  ಡಾ// ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ, ಅಪಮಾನ ಎಸಗಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಅದು ಖಂಡನೀಯ ವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.ಇಂಥಹ ನ್ಯಾಯಾಧೀಶರನ್ನು ಶೀಘ್ರವೇ ಸೇವಾವೃತ್ತಿಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ರಾಜ್ಯಪಾಲರಿಗೆ ಮನವಿ ಪತ್ರವನ್ನು  ತಹಶೀಲ್ದಾರರಾದ ಟಿ. ಜಗದೀಶ್ ರವರ ಮೂಲಕ ಮನವಿ ಸಲ್ಲಿಸಿದರು, ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಪಾಪಯ್ಯ, ಕಾರ್ಯದರ್ಶಿಬಿ. ಸಿದ್ಲಿಂಗಪ್ಪ. ಮದ್ದಾನಪ್ಪ, ನಾರಪ್ಪ, ರಾಮಪ್ಪ, ಹಾರಕಬಾವಿ ರವಿಕುಮಾರ, ಸಿ.ವಿರುಪಾಕ್ಷಪ್ಪ, ಹೆಚ್.ರವಿಕುಮಾರ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯ ವಕೀಲರು ಪಾಲ್ಗೊಂಡಿದ್ದರು.

ವಂದೇ ಮಾತರಂ  ವಿ.ಜಿ. ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *