ನಾಡ ಧ್ವಜ ಸುಟ್ಟು ಹಾಕಿದ ನಾಡ ದ್ರೋಹಿಗಳನ್ನು ಗಡಿ ಪಾರು ಮಾಡಿ ರಾಜ್ಯದಲ್ಲಿ  ಎಮ್.ಇ.ಎಸ್‌ ನಿಷೇಧಿಸಬೇಕು :  ಸಿದ್ದಾರ್ಥ ಮಿತ್ರಾ ಆಗ್ರಹ.

Spread the love

ನಾಡ ಧ್ವಜ ಸುಟ್ಟು ಹಾಕಿದ ನಾಡ ದ್ರೋಹಿಗಳನ್ನು ಗಡಿ ಪಾರು ಮಾಡಿ ರಾಜ್ಯದಲ್ಲಿ  ಎಮ್..ಎಸ್ನಿಷೇಧಿಸಬೇಕುಸಿದ್ದಾರ್ಥ ಮಿತ್ರಾ ಆಗ್ರಹ.

ಹುಮನಾಬಾದ : ಕನ್ನಡ ನಾಡು ನುಡಿ,ಕನ್ನಡಿಗರ ಅಸ್ಮಿತೆಯನ್ನು ಪದೆ ಪದೆ ಕೆಣಕುವ ಮೂಲಕ ಕನ್ನಡಿಗರ ತಾಳ್ಮೆಯನ್ನು ಪರಿಕ್ಷಿಸುತ್ತಿರುವ ಎಮ್.ಎಸ್ ಪುಂಡರ ಸೊಕ್ಕನ್ನು ಅಡಗಿಸಬೇಕಿದೆ ಎಂದು ಧರಿನಾಡು ಸಂಘದ ಅಧ್ಯಕ್ಷ ಸಿದ್ದಾರ್ಥ ಮಿತ್ರಾ  ರವರು  ಸರಕಾರಕ್ಕೆ ಆಗ್ರಹಿಸಿದಾರೆ. ಅವರು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಾಡ‌ ಭಾವುಟ ಸುಟ್ಟು ಹಾಕಿದ ಆರೊಪಿಗಳನ್ನು ಈ ಕೂಡಲೆ ಬಂದಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಇಲ್ಲವಾಗಿದರೆ ನಾಡಿನದ್ದುಕ್ಕು ಕನ್ನಡಿಗರು ಬೆಳಾಗಿವಿಗೆ  ತೆರಳಿ ಎಮ್.ಇ.ಎಸ್.ಪುಂಡರ ಮದವನ್ನು ಅಡಗಿಸಬೆಕಾಗುತ್ತದೆ. ಕನ್ನಡ ಧ್ವಜ ಕನ್ನಡಿಗರ ಸ್ವಾಭಿಮಾನದ ಸಂಕೇತ. ಕನ್ನಡ ಧ್ವಜಕ್ಕೆ ಅಪಮಾನವಾದರೆ ಅದು ಕರ್ನಾಟಕದ ಅಸ್ಮಿತೆಗೆ ಧಕ್ಕೆಯಾದಂತೆ. ಇಂತಹ ಪವಿತ್ರ ಧ್ವಜವನ್ನು ಸುಟ್ಟಿರುವುದು ಯಾರೂ ಸಹಿಸಲಾಗದ ಸಂಗತಿ. ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ ಎಂಇಎಸ್‌ ಪುಂಡರು,ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ದುಷ್ಕೃತ್ಯ. ಧ್ವಜವನ್ನು ಸುಟ್ಟು ಹಾಕಿ ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಈ ರೀತಿಯ ಘಟನೆ ಸಹಿಸಲು ಸಾಧ್ಯವಿಲ್ಲ ಎಂದು ಧರಿನಾಡು ಕನ್ನಡ ಸಂಘ ತಾಲೂಕ ಅಧ್ಯಕ್ಷ ತಮ್ಮ ಆಕ್ರೊಶವನ್ನು ಹೊರಹಾಕಿದರು.

ವರದಿಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *