ವಿಜಯನಗರ:ಕೋಲೆ, ದರೋಡಪ್ರಕರಣ 5 ಆರೋಪಿಗಳ ಬಂಧನ….

Spread the love

ವಿಜಯನಗರ:ಕೋಲೆ, ದರೋಡಪ್ರಕರಣ 5 ಆರೋಪಿಗಳ ಬಂಧನ….

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ರಾಣಿಪೇಟೆಯಲ್ಲಿ ಅಕ್ಟೋಬರ್‌ 22 ರಂದು ನಡೆದ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಐದು ಜನ ಆರೋಪಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ. ಹೊಸಪೇಟೆ ನಗರ ಠಾಣೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು.‌ಬಟ್ಟೆಗಳನ್ನು ಖರೀದಿಸುವ ನೆಪದಲ್ಲಿ ಬಂದು ಒಬ್ಬ ವೃದ್ದೆಯನ್ನು ಕೊಂದು ಮತ್ತೋರ್ವ ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ಮತ್ತು ಹಣ ದೋಚಿಕೊಂಡು ಹೋಗಿದ್ದ ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ತೈಬುಲ್ಲಾ(25),ಗೀತಾ(38), ದಾವಣಗೆರೆ ಎ.ಎಸ್ ನಾಗರಾಜ(26), ಕೆ.ಬೀರೇಶ್(24), ಭದ್ರಾವತಿಯ (33)ಎಂಬುವವರನ್ನು ಬಂಧಿಸಲಾಗಿದೆ. ಹೊಸಪೇಟೆ ಪೊಲೀಸರ ಕಾರ್ಯವನ್ನು ಐ.ಜಿ.ಪಿ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತ ಪಡಿಸಿ ಒಂದು ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ ಎಂದು ಡಾ.ಅರುಣ್ ತಿಳಿಸಿದರು. ಮುಂದಿನ ತನಿಖೆಯಲ್ಲಿ ಪ್ರಕರಣದ ಹಿಂದಿನ ಉದ್ದೇಶ ತಿಳಿಯಲಾಗುವುದು ಎಂದರು. ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಇನ್ಸ್ಪೆಕ್ಟರ್ ಜಯಪ್ರಕಾಶ್, ಶ್ರೀನಿವಾಸರಾವ್ ಪಾಲ್ಗೊಂಡಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *