ಕೊವ್ಯಾಕ್ಸೀನ್ ಜಾಗ್ರತೆ ಮೂಡಿಸಿದ ಪಪಂ ಸದಸ್ಯ ಬಾಸುನಾಯ್ಕ-

Spread the love

ಕೊವ್ಯಾಕ್ಸೀನ್ ಜಾಗ್ರತೆ ಮೂಡಿಸಿದ ಪಪಂ ಸದಸ್ಯ ಬಾಸುನಾಯ್ಕ

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ,20ನೇ ವಾರ್ಡ್ ಗೋವಿಂದಗಿರಿ ಹಾಗು ಗೋವಿಂದಗಿರಿ ತಾಂಡದಲ್ಲಿ. ಪಪಂ ಸದಸ್ಯ ಬಾಸುನಾಯ್ಕ ಸ್ವತಃ ತಾವೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳೊದರ ಮೂಲಕ,ಕೋವಿಡ್ ಲಸಿಕಾ ಜಾಗ್ರತೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ನಂತರ ಲಸಿಕಾ ತಂಡದವರೊಡಗೂಡಿ ಗ್ರ‍ಾಮದ ಮನೆ ಮನಗೆ ತೆರಳಿ, ಗ್ರಾಮಸ್ಥರಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಈ ಮೂಲಕ ಕೋವ್ಯಾಕ್ಸೀನ್ ಲಸಿಕೆ ಕುರಿತು ಆರೋಗ್ಯ ಇಲಾಖೆಯೊಂದಿಗೆ,ಪಪಂ ಸದಸ್ಯ ಬಾಸುನಾಯ್ಕ ಕೋ ವ್ಯಾಕ್ಸೀನ್ ಅಭಿಯಾನದಲ್ಲಿ ಸಂಪೂರ್ಣ ತೊಡಗಿಸಿಕೊಂಡು ಯಶಸ್ವೀಗೊಳಿಸಿದ್ದಾರೆ.ಈ ಸಂದರ್ಭದಲ್ಲಿ  ಆರೋಗ್ಯ ಇಲಾಖೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿವರಾದ ನಾಗೇಂದ್ರ, ಸರೋಜಮ್ಮ, ನಾಗರಾಜ,ರತ್ನಮ್ಮ, ಜ್ಯೋತಿ,ಮಲ್ಲಮ್ಮ,ಶೃತಿ,ರಂಜನಿ,ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು, ಉಮೇಶನಾಯ್ಕ, ಚಿತ್ತಪ್ಪ,ಬಂಗಾರಿ ಈರಪ್ಪ,ಶಂಕರನಾಯ್ಕ,ಹನುಮಾನಾಯ್ಕ,ನಾಗರಾಜ ನಾಯ್ಕ,ಪೂಜಾರಿ ನಾಯ್ಕ ಸೇರಿದಂತೆ ಗ್ರಾಮದ ಯುವಕರು, ಮಹಿಳೆಯರು, ಗ್ರಾಮದ ಹಿರಿಯರು ಹಾಗೂ ನಾಗರೀಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-908937428

Leave a Reply

Your email address will not be published. Required fields are marked *