ಜುಮಲಾಪೂರ ಪ್ರೌಢಶಾಲಾ ಶೌಚಾಲಯ ಸಮಸ್ಯೆ ನಾಂದಿ ಜೊತೆಗೆ ಕಾಮಗಾರಿ ಗುದ್ದಲಿ ಪೂಜೆ…..

Spread the love

ಜುಮಲಾಪೂರ ಪ್ರೌಢಶಾಲಾ ಶೌಚಾಲಯ ಸಮಸ್ಯೆ ನಾಂದಿ ಜೊತೆಗೆ ಕಾಮಗಾರಿ ಗುದ್ದಲಿ ಪೂಜೆ…..

ಇಂದು ಶಾಲಾ ಆವರಣದಲ್ಲಿ ಜುಮಲಾಪೂರ ಗ್ರಾಮದ ಸಾರ್ವಜನಿಕರು ಹಾಗೂ ಭೂ ದಾನಿಗಳ ಹಾಗೂ ತಾವರಗೇರ ಠಾಣೆಯ ಎ ಎಸ್ ಐ ಮಲ್ಲಪ್ಪ ವಜ್ರದ ಹಾಗೂ ತಾವರಗೇರ ಮುಖಂಡರರಾದ ಚಂದ್ರಶೇಖರ್ ನಾಲತ್ವಾಡ್ ಮಲ್ಲಪ್ಪ ಬಳೂಟಗಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶ್ರೀ ದೊಡ್ಡಪ್ಪ ಚವ್ಹಾಣ  ಮದ್ಯಸ್ಥಿಕೆಯಲ್ಲಿ ಎಲ್ಲ ವಿಚಾರಗಳನ್ನು ಕುಲಂಕುಷವಾಗಿ ಮಾತನಾಡಿ ಮಕ್ಕಳ ಶೌಚಾಲಯದ ಕುರಿತು ಮಕ್ಕಳ ಉಜ್ವಲ ಭವಿಷ್ಯಕ್ಕೊಸ್ಕರ ಭೂ ದಾನಿಗಳು  ಯಾವುದೇ ರಿತಿಯಿಂದ ತೊಂದರೆ ನಿಡಬಾರದು ಹಾಗೆ ಶಾಲೆಗೆ  ಭೂ ದಾನ ನಿಡಿರುವವರನ್ನು  ಅತ್ಯಂತ ಗೌರವದಿಂದ ಕಾಣಬೇಕು ಬಹು ಗ್ರಾಮಗಳಲ್ಲಿ ಭೂ ದಾನ ನಿಡುವವರು ಸಂಖ್ಯೆ ಬಹಳ ವಿರಳ ಹಾಗಾಗಿ ಭೂ ದಾನಿಗಳಿಗೆ ಗೌರವ ಕೊಡುತ್ತಾ ಹೋಗಬೇಕಾಗಿದೆ ಎಂದರು ಈ ಸಂದರ್ಭದಲ್ಲಿ ಈ ಶಾಲಾ ಮುಖ್ಯೋಪಾಧ್ಯಾಯರ ಬಗ್ಗೆ ಹಾಗೂ ಸಣ್ಣಪುಟ್ಟ ಮನಸ್ತಾಪ ಮಾಡಿಕೊಂಡಿದ್ದ  ಭೂ ದಾನಿಗಳಾದ ಅಡಿವೆಪ್ಪ ಕಲ್ಲಪ್ಪ   ಅವರನ್ನು     ಸಭೆಯಲ್ಲಿ ಬಾಗವಹಿಸಿದ್ದ  ಹಿರಿಯರ ಸಮ್ಮುಖದಲ್ಲಿ ಮನವೊಲಿಸಲಾಯಿತು ತದನಂತರದಲ್ಲಿ ಗ್ರಾಮಸ್ಥರು ಹಾಗೂ ತಾವರಗೇರ ಮುಖಂಡರು ಹಾಗೂ ಪಂಚಾಯತ್ ಸದಸ್ಯರು ಭೂ ದಾನಿಗಳು  ಎಲ್ಲರೂ ಸೇರಿ ಶೌಚಾಲಯದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಈ ಸಮಸ್ಯೆ ಯನ್ನು ಇತ್ಯರ್ಥ ಮಾಡಿದರು..

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *