ಹಿರೇಬಾಗೇವಾಡಿ  ಪ್ರಜೆಗಳ ಅನುಕೂಲಕ್ಕಾಗಿ ನೂತನ ಶಾಖೆ ಉದ್ಘಾಟನೆ.

Spread the love

ಹಿರೇಬಾಗೇವಾಡಿ  ಪ್ರಜೆಗಳ ಅನುಕೂಲಕ್ಕಾಗಿ ನೂತನ ಶಾಖೆ ಉದ್ಘಾಟನೆ.

ಇಂದು ಬೆಳಗಾವಿ ಜಿಲ್ಲೆಯ  ಹಿರೇಬಾಗೇವಾಡಿ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ, ಅವರ 59 ನೇ ಹುಟ್ಟು ಹಬ್ಬದ ಪ್ರಯುಕ್ತ  ನಮ್ಮ ಸಂಸ್ಥೆಯ  ಅಂಗಸಂಸ್ಥೆಯಾದ ಶ್ರೀ. ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಶಾಖೆ  ಹಿರೇಬಾಗೇವಾಡಿ 63 ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಶ್ರೀ ಗುರು ಮಡಿವಾಳೇಶ್ವರ ದೇವರಶೀಗಿಹಳ್ಳಿ ಮಠದ  ಶ್ರೀ ಮ.ನಿ.ಪ್ರ  ವೀರೇಶ್ವರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ಉಪಾಧ್ಯಕ್ಷರಾದ ಶ್ರೀ ಬಾಬುರಾವ ಮಾಳಿ, ನಿರ್ದೇಶಕರಾದ  ಶ್ರೀ ಕಲ್ಲಪ್ಪ ಜಾಧವ, ಶ್ರೀ ವಿಶ್ವನಾಥ ಪೇಟಕರ, ಮುಖಂಡರಾದ ಶ್ರೀ ಪಡಿಗೌಡಾ ಪಾಟೀಲ, ಶ್ರೀ ಬಸವರಾಜ ಅರಳಿಕಟ್ಟಿ, ಶ್ರೀ ಬಾಬು ಪಡಗಲ್ಲ,ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಎಸ್.ಎಮ್. ಹುಕ್ಕೇರಿ,ಶ್ರೀ ಬಸಪ್ಪ ವಾಲಿಶೆಟ್ಟರ, ಶ್ರೀ ಮಲ್ಲಿಕಾರ್ಜುನ ರೊಟ್ಟಿ,  ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಿಜಯ ಖಡಕಭಾವಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *