ಹಣದ ಬ್ಯಾಗ್​ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್​, ಡ್ರೈವರ್.. ​ಎರಡು ಲಕ್ಷ ರೂ. ವಾಪಸ್!

Spread the love

ಹಣದ ಬ್ಯಾಗ್ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್​, ಡ್ರೈವರ್.. ​ಎರಡು ಲಕ್ಷ ರೂ. ವಾಪಸ್!

ಗಂಗಾವತಿಯಲ್ಲಿ ಹಣ ತುಂಬಿದ ಬ್ಯಾಗ್​ ಬಿಟ್ಟು ಬಸ್​ನಿಂದ ಇಳಿದಿದ್ದ ಪ್ರಯಾಣಿಕನಿಗೆ ಬ್ಯಾಗ್​ ಹಿಂದಿರುಗಿಸುವ ಮೂಲಕ ​ಬಸ್​​ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. ಗಂಗಾವತಿ: ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಹಣ ತುಂಬಿದ್ದ ಬ್ಯಾಗ್​ ಬಿಟ್ಟು ಇಳಿದಿದ್ದ ಪ್ರಯಾಣಿಕನಿಗೆ ಮರೆತುಹೋಗಿದ್ದ ಬ್ಯಾಗ್ಅನ್ನು​​ ತಲುಪಿಸುವ ಮೂಲಕ ಬಸ್​​ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ. ​ಇಲ್ಲಿನ ಸಾರಿಗೆ ಘಟಕದ ಚಾಲಕ ಹನುಮಸಾಗರದ ಮಡಿವಾಳ ಯಮನೂರ ಹಾಗೂ ನಿರ್ವಾಹಕ ರುದ್ರಪ್ಪ ಎಂಬುವರು ಬ್ಯಾಗ್​ ಹಿಂದಿರುಗಿಸಿ ಪ್ರಾಮಾಣಿಕತೆ ಮಾನವೀಯತೆ ಮೆರೆದ ಸಿಬ್ಬಂದಿಯಾಗಿದ್ದಾರೆ.  ರಾಯಚೂರಿನಿಂದ ಗಂಗಾವತಿಗೆ ಬರುತ್ತಿದ್ದ ಬಸ್​ನಲ್ಲಿ ಸಂಚರಿಸುತ್ತಿದ್ದ ಗಾವುಲ ನರಸಿಂಹ ಎಂಬ ಪ್ರಯಾಣಿಕರೋರ್ವರು ಮಾರ್ಗ ಮಧ್ಯೆ ಸಿಂಧನೂರಿನಲ್ಲಿ ಹಣದ ಬ್ಯಾಗ್​​ನ್ನು ಬಸ್​ನಲ್ಲಿ​ ಬಿಟ್ಟು ಇಳಿದುಕೊಂಡಿದ್ದರು.  ಬಳಿಕ ಬ್ಯಾಗ್​ ಬಿಟ್ಟು ಬಂದಿರುವುದಾಗಿ ತಿಳಿದ ಪ್ರಯಾಣಿಕ ಪುನಃ ಬೇರೊಂದು ಬಸ್​ ಹತ್ತಿ ಗಂಗಾವತಿಗೆ ತೆರಳಿದ್ದರು. ಈ ವೇಳೆ ಬಸ್​ ಚಾಲಕ ಮತ್ತು ನಿರ್ವಾಹಕ ಡಿಪೋ ಮ್ಯಾನೇಜರ್​ ಮೂಲಕ ಹಣದ ಬ್ಯಾಗ್​ ಅನ್ನು ಪ್ರಯಾಣಿಕ ನರಸಿಂಹ ಅವರಿಗೆ ತಲುಪಿಸಿದ್ದಾರೆ. ಈ ಇವರಿಬ್ಬರು ಸಾರಿಗೆ ಇಲಾಖೆ ಸಿಬ್ಬಂದಿಗೆ ಮಾದರಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. .

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *