ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಯರಮರಸ್ ವಿಭಾಗದ ಅಧ್ಯಕ್ಷರಾಗಿ ಸಿದ್ದಪ್ಪಗೌಡ ಅವಿರೋಧ ಆಯ್ಕೆ…..

Spread the love

ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಯರಮರಸ್ ವಿಭಾಗದ ಅಧ್ಯಕ್ಷರಾಗಿ ಸಿದ್ದಪ್ಪಗೌಡ ಅವಿರೋಧ ಆಯ್ಕೆ…..

ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಕೆ.ನಾಗಲಿಂಗಸ್ವಾಮಿ ನೇತೃತ್ವದಲ್ಲಿ ಇಂದು ಯರಮರಸ್ ವಿಭಾಗದ ಮಟ್ಟದ ಪದಾಧಿಕಾರಿಗಳ ಅಯ್ಕೆ ಸಭೆಯು ಯಶಸ್ವಿಯಾಗಿ ಜರುಗಿತು. ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಯರಮರಸ್ ವಿಭಾಗದ ಅಧ್ಯಕ್ಷರಾಗಿ ಸಿದ್ದಪ್ಪಗೌಡ ಯರಮರಸ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬಸನಗೌಡ ಕಲ್ಲೂರು, ಉಪಾಧ್ಯಕ್ಷರಾಗಿ ಮಹಮ್ಮದ್ ಅಪ್ಸರ್ ಅಲಿ, ಖಜಾಂಚಿಯಾಗಿ ಪ್ರಹ್ಲಾದ್ ರಾವ್, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟೇಶ ಹುಣಿಶಾಳಹುಡ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರ್.ವೆಂಕಟೇಶ, ಶರಣಯ್ಯಸ್ವಾಮಿ ಕಲ್ಲೂರು, ಈರಣ್ಣ ಹುಣಿಸಿಹಾಳಹುಡ, ಶರಣಬಸವ ಕಲಮಲಾ, ಯಲ್ಲಪ್ಪ ಉಡಮಗಲ್, ನಾಗರಾಜ ಆಶಾಪೂರ, ಬಸವರಾಜ ಅತ್ತನೂರು ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಸಂಘದ ಕೇಂದ್ರ ಸಮಿತಿಯ ಕಾರ್ಯದರ್ಶಿ ಬಸವರಾಜ ಮರಕಮದಿನ್ನಿ, ಜಲಾಲಫಾಶ, ಬಸವರಾಜ ಸಾಲಮನಿ ಬಾಗಲವಾಡ ಸೇರಿದಂತೆ ಯರಮರಸ್, ಆರ್.ಡಿ.ಎಸ್, ಕಲ್ಲೂರು ಉಪವಿಭಾಗದ ನೂರಾರು ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಂ.ಬಸವರಾಜ  ಪ್ರಧಾನ ಕಾರ್ಯದರ್ಶಿ ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘ ಕೇಂದ್ರ ಸಮಿತಿ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *