ಲಿಂಗಸಗೂರು ಕ್ಷೇತ್ರದ ಸಂಪೂರ್ಣ ನೀರಾವರಿ ಜಾರಿಗೆ ಕೇಂದ್ರ ಸಚಿವರಿಗೆ ಮಾಜಿ ಶಾಸಕ ವಜ್ಜಲ್ ಮನವಿ…..

Spread the love

ಲಿಂಗಸಗೂರು ಕ್ಷೇತ್ರದ ಸಂಪೂರ್ಣ ನೀರಾವರಿ ಜಾರಿಗೆ ಕೇಂದ್ರ ಸಚಿವರಿಗೆ ಮಾಜಿ ಶಾಸಕ ವಜ್ಜಲ್ ಮನವಿ…..

ಲಿಂಗಸಗೂರು:ಜೂ೨೪:ಕ್ಷೇತ್ರದ ಸಂಪೂರ್ಣ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಕುರಿತಾಗಿ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಮಾಜಿಶಾಸಕ ಮಾನಪ್ಪ ವಜ್ಜಲ್ ಹಾಗೂ ಸಂಸದ ರಾಜಾ ಅಮರೇಶ್ವರನಾಯಕ ದೆಹಲಿಯಲಿ ಭೇಟಿಯಾಗಿ ಮನವಿ ಸಲ್ಲಿಸಿದರು ನಾರಾಯಣಪುರ ಬಲದಂಡೆ ನವೀಕರಣ ಮತ್ತು ಲಿಂಗಸಗೂರು ಕ್ಷೇತ್ರದ ಕೆರೆ ತುಂಬುವ ಯೋಜನೆ ಹಾಗೂ ಕ್ಷೇತ್ರದಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಯೋಜನೆಗಳ ರೂಪಿಸುವಿಕೆಗಾಗಿ ಕೇಂದ್ರ ಸರಕಾರದ ನೆರವನ್ನು ಕೋರಿ ಸಚಿವರಿಗೆ ಮನವಿ ಸಲ್ಲಿಸುತ್ತಾ ಕ್ಷೇತ್ರಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ ಕೇಂದ್ರ ಸಚಿವರನ್ನು ಭೇಟಿಯಾದ ಮುಖ್ಯ ಉದ್ದೇಶವೆಂದರೆ ಲಿಂಗಸಗೂರು ಕ್ಷೇತ್ರಕ್ಕೆ ಸಂಪೂರ್ಣವಾಗಿ ನೀರಾವರಿ ಒದಗಿಸಲು ಕ್ರಮಕೈಗೊಳ್ಳುವ ಕುರಿತು ಚರ್ಚಿಸಿದ್ದು ಕೇಂದ್ರದಲ್ಲಿ ಅನುದಾನವಿರುತ್ತಿದ್ದು ಅದರಿಂದ ಕ್ಷೇತ್ರ ಸಂಪೂರ್ಣವಾಗಿ ನೀರಾವರಿಯ ಗುರಿಯ ಚರ್ಚೆ ಮಾಡಲಾಯಿತು.

ವರದಿ  – ಸಂಪಾದಕೀಯ

Leave a Reply

Your email address will not be published. Required fields are marked *