ಅಂಬೇಡ್ಕರ ಭವನ ನಿರ್ಮಾಣಕ್ಕೆ 2 ಕೋಟಿ ಬಿಡುಗಡೆಗೆ DSS ಒತ್ತಾಯ
ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದ ಡಾಬಿ.ಆರ್. ಅಂಬೇಡ್ಕರ ಭವನ ನಿರ್ಮಾಣಕ್ಕೆ 2 ಕೋಟಿ ಹಣ ಬಿಡುಗಡೆಗೆ ದಲಿತ ಸಂಘರ್ಷ ಸಮಿತಿ ಮನವಿ ಲಿಂಗಸೂಗೂರ್ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕ ಸಮಿತಿ ಲಿಂಗಸಗೂರು ಪಟ್ಟಣದಲ್ಲಿ ಇದು ಮೀಸಲು ಕ್ಷೇತ್ರವಾಗಿದ್ದು, ಇಂದಿನವರೆಗೂ ಡಾ.ಬಿ.ಆರ್. ಅಂಬೇಡ್ಕರ ಭವನ ಇರುವುದಿಲ್ಲ. ಇದರಿಂದ ಡಾ.ಬಿ.ಆರ್. ಅಂಬೇಡ್ಕರ ಭವನ ನಿರ್ಮಾಣದ ಕಾಮಗಾರಿ ಮಂಜೂರಾತಿ 2012-13ನೇ ಸಾಲಿನಲ್ಲಿ ರೂ.50,00ಲಕ್ಷ ಮಂಜೂರಾಗಿದ್ದು ಇರುತ್ತದೆ. ಆದರೆ ಕಾಮಗಾರಿ ನಿರ್ಮಾಣ ಮಾಡುವ ಸ್ಥಳ ಲಭ್ಯವಿದ್ದು, ಕಾಮಗಾರಿ ಕೈಗೊಳ್ಳಲು ಕೇವಲ 50.00ಲಕ್ಷ ರೂಗಳು ಮಂಜೂರಾತಿ ನೀಡಿದ್ದು, ಈ ಹಣ ಸಾಕಾಗುವುದಿಲ್ಲ ಈಗ ಮಂಜೂರು ಮಾಡಿರುವ ಹಣದ ಬದಲಿಗೆ ಈಗ 2,00ಕೋಟಿ ಹಣ ಮಂಜೂರಾತಿ ನೀಡಿ ಸುಸಜ್ಜಿತ ಭವನ ನಿರ್ಮಾಣ ಮಾಡಲು ಅನುಕೂಲವಾಗುವುದು ಸಾಕಷ್ಟು ವರ್ಷಗಳು ಸಮಯ ವಿಳಂಬವಾಗಿದ್ದು, ನಮ್ಮ ಸಂಘಟನೆಯ ಮನವಿಯನ್ನು ಪರಿಗಣಿಸಿ ಕೂಡಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ. ಒಂದು ವೇಳೆ ಈ ನಮ್ಮ ಸಂಘಟನೆಯ ಮನವಿಗೆ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಯಂಕಪ್ಪ ಎಂ, ಚಿತ್ತಾಪೂರ ಜಿಲ್ಲಾ ಸಂಘಟನಾ ಸಂಚಾಲಕರು ಯಮನಪ್ಪ ಸರ್ಜಾಪೂರ ಹಾಗೂ ಶ್ರೀಕಾಂತ್ ಹುನೂರು ಲಿಂಗಸುಗೂರ್ ಸಹಾಯಕ ಆಯುಕ್ತರು ಮೂಲಕ ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವರು, ಕರ್ನಾಟಕ ಸರಕಾರ ಮನವಿ ಸಲ್ಲಿಸಿದರು.
ವರದಿ – ಸಂಪಾದಕೀಯ