ವಿಕಲಚೇತನ ಒಕ್ಕೂಟ ತಾ ಅಧ್ಯಕ್ಷ ಚಂದ್ರಶೇಖರ ಕಂಬಾರ ನೆತೃತ್ವದಲ್ಲಿ  ಮುದೆನೂರ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಾಲು ಹಣ್ಣು ವಿತರಣೆ….

Spread the love

ವಿಕಲಚೇತನ ಒಕ್ಕೂಟ ತಾ ಅಧ್ಯಕ್ಷ ಚಂದ್ರಶೇಖರ ಕಂಬಾರ ನೆತೃತ್ವದಲ್ಲಿ  ಮುದೆನೂರ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಾಲು ಹಣ್ಣು ವಿತರಣೆ…..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮುದೆನೂರ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೆವರಾಗಿರುವ  ಪರಮ ಪೂಜ್ಯ  ಲಿಂಗೈಕ್ಯರಾದ ಡಾ. ಚಂದ್ರಶೇಖರ ಮಹಾಸ್ವಾಮಿಗಳ  ಪುಣ್ಯ ಸ್ಮರೋತ್ಸವ  ಅಂಗವಾಗಿ   ಸತತವಾಗಿ ಹತ್ತು ವರ್ಷಗಳಿಂದ ವಿಕಲಚೇತನ ಒಕ್ಕೂಟ ತಾಲ್ಲೂಕು ಅಧ್ಯಕ್ಷರಾದ ಚಂದ್ರಶೇಖರ್ ಕಂಬಾರ ನೆತೃತ್ವದಲ್ಲಿ  ಮುದೆನೂರ ಪ್ರಾಥಮಿಕ  ಆರೋಗ್ಯ ಕೇಂದ್ರದಲ್ಲಿ ಇರುವ  ಬಡ ರೋಗಿಗಳಿಗೆ  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಲು ಹಣ್ಣು ವಿತರಣೆ ಮಾಡುತ್ತಾ  ಬಂದಿರುವುದು ಮಾನವೀಯ ಗುಣ ಧರ್ಮವಾಗಿದೆ. ಆ ನಿಟ್ಟಿನಲ್ಲಿ ವಿಕಲಚೇತನ ಒಕ್ಕೂಟದ ನೆತೃತ್ವದಲ್ಲಿ  ಪರಮಪೂಜ್ಯ ಲಿಂಗೈಕ್ಯರಾದ ಡಾ. ಚಂದ್ರಶೇಖರ ಮಹಾಸ್ವಾಮಿಗಳ  ಪುಣ್ಯ  ಸ್ಮರೋತ್ಸವ ದಿನದಂದು ಬಡ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಕಾರ್ಯಕ್ರಮ ಮುಂದುವರೆಸಿಕೊಂಡು ಬರುತ್ತಿರುವುದು  ವಿಶೇಷ ವಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿ ಡಾ. ಮುಖೇಶ ಚವ್ಹಾಣ ಮತ್ತು ಡಾ ನಿಲಪ್ಪ ಕಟ್ಟಿಮನಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಗೂ ಊರಿನ ಗುರು ಹಿರಿಯರು ಭಾಗವಹಿಸಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *