ತಾವರಗೇರಾ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂಧೆ ವರ್ಗವಾಣೆ, ಪ್ರಭಾರಿಯಾಗಿ ಮಲ್ಲಪ್ಪ ವಜ್ರದ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂಧೆಯವರು ಹಿರಿಯ ಅಧಿಕಾರಿಗಳ ಆದೇಶದಂತೆ ಮೇ 22 ರಂದು ತಾವರಗೇರಾ ಪೊಲೀಸ್ ಠಾಣೆಯಿಂದ ನೇರವಾಗಿ ಶಿರವಾರ ಠಾಣೆಗೆ ವರ್ಗಾವಣೆ ಗೊಂಡಿದ್ದರು. ಇಂದು ಜಿಲ್ಲೆಯ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯಿಂದ ಇಂದು ಬಾನುವಾರದೊಂದು ಬಿಡುಗಡೆಗೊಂಡರು,
ಸ್ಥಳಿಯ ಠಾಣೆಯಲ್ಲಿ ಧಕ್ಷ ಹಾಗೂ ಪ್ರಮಾಣಿಕ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ, ನಿಷ್ಠುರವಾದಿಯಾದ ಮಲ್ಲಪ್ಪ ವಜ್ರದ ಇವರು ಠಾಣೆಯ ಸಂಪೂರ್ಣ ಜವಬ್ಧಾರಿಯನ್ನು ಸ್ವೀಕರಿಸಿಕೊಂಡರು. ಈ ಸಂದರ್ಭದಲ್ಲಿ ತಾವರಗೇರಾ ಠಾಣೆಯಿಂದ ಬಿಡುಗಡೆಗೊಂಡ ಪಿ.ಎಸ್.ಐ ಗೀತಾಂಜಲಿ ಶಿಂಧೆಯವರನ್ನು ಕುಷ್ಟಗಿ ಠಾಣೆಯ ಸಿಪಿಐಗಳಾದ ನಿಂಗಪ್ಪ ಎನ್.ಆರ್. ಹಾಗೂ ಸ್ಥಳಿಯ ಠಾಣೆಯ ಎಎಸ್ಐ ಹಾಗೂ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ. ಒಟ್ಟಿನಲ್ಲಿ ಪಿಎಸ್ಐ ಗೀತಾಜಂಲಿ ಶಿಂಧೆಯವರು ಕರ್ತವ್ಯಕ್ಕೆ ತಾವರಗೇರಾ ಪಟ್ಟಣದ ಬುಂದಿವಂತ ಜನರಿಂದ ಬೆಸ್ ಎನ್ನಿಸಿಕೊಂಡಿದ್ದಾರೆ, ಯಾರ ಮಾತೀಗೂ ಬಗ್ಗದೇ, ಜಗ್ಗದೇ ಕಾನೂನಿನ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸಿದ್ದು ಜಿಲ್ಲೆಗೆ ಹೆಸರಾಗಿ ಮುಂದಿನ ಏಳಿಗೆಗೆ ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಗೊಂಡು ಇಂದು ತಾವರಗೇರಾ ಪಟ್ಟಣದಿಂದ ಶಿರವಾರ ಪಟ್ಟಣಕ್ಕೆಹೆಜ್ಜೆ ಇಟ್ಟಿದ್ದಾರೆ, ಒಟ್ಟಿನಲ್ಲಿ ಇವರ ಪ್ರತಿ ಹೆಜ್ಜೆಯು ಯಶಸ್ವಿಯಾಗಿ ಸಾಗಲೆಂದು ಆರೈಸುವೇವು.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ.