ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಿವಿದೆಡೆಗಳಲ್ಲಿ, ನಾಡಿನ ದಲಿತ ಕವಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು

Spread the love

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಿವಿದೆಡೆಗಳಲ್ಲಿ, ನಾಡಿನ ದಲಿತ ಕವಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು

ಕೂಡ್ಲಿಗಿ ಪಟ್ಟಣದಲ್ಲಿ ಡಾ,ಸಿದ್ದಲಿಂಗಯ್ಯರಿಗೆ ಶ್ರದ್ಧಾಂಜಲಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಿವಿದೆಡೆಗಳಲ್ಲಿ, ನಾಡಿನ ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದ ದಿವಂಗತ ಡಾ,ಸಿದ್ದಲಿಂಗಯ್ಯರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲೂಕು ಕಚೇರಿ ಕೂಡ್ಲಿಗಿ ಯಲ್ಲಿ ತಹಶಿಲ್ದಾರ್ ಟಿ.ಜಗದೀಶ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು, ದಿವಂಗತರಿಗೆ ನುಡಿನಮನ ಸಲ್ಲಿಸಲಾಯಿತು ಹಾಗೂ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಣೆ ಮಾಡಲಾಯಿತು.ತಾಪಂ ಇಓ ,ಜಿ.ಎಮ್.ಬಸಣ್ಣ,ಸಿಪಿಐ ವಸಂತ ಅಸೋದೆ, ದಲಿತ ಮುಖಂಡರಾದ ಎಸ್.ದುರುಗೇಶ್, ಟಿ.ಉಮೇಶ, ವಕೀಲರಾದ ಡಿ.ಹೆಚ್.ದುರುಗೇಶ್. ತಹಶಿಲ್ದಾರವರ ಕಚೇರಿ ಸಿಬ್ಬಂದಿ ಹಾಗೂ ಮುಂತಾದವರಿದ್ದರು.  ಡಾ,ಅಂಬೇಡ್ಕರ್‌ ವೃತ್ತದಲ್ಲಿ ಶ್ರದ್ಧಾಂಜಲಿ ಪಟ್ಟಣದ ಡಾ,ಅಂಬೇಡ್ಕರ್ ವೃತ್ತದಲ್ಲಿ ದಲಿತ ಮುಖಂಡ ಎಸ್.ದುರುಗೇಶ ನೇತೃತ್ವದಲ್ಲಿ, ದಲಿತ ಕವಿ ದಿವಂಗತ ಡಾ,ಸಿದ್ದಲಿಂಗಯ್ಯ ರವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ದಲಿತ ಸಂಘಟನೆಕಾರರಾದ ಬಿ.ಮಹೇಶ್,ಕೆ.ಮೂಗಪ್ಪ,ಕೆ. ಬಸವರಾಜ್,ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಹೆಚ್.ಎಮ್.ಸಚಿನ್ ಕುಮರ್ ಸೇರಿದಂತೆ ಮುಂತಾದವರಿದ್ದರು.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *