ಲಿಂಗಸೂಗೂರ,ಹಗಲಿರುಳು ಎನ್ನದೆ ಶ್ರಮಿಸುವ ಪತ್ರಕತ೯ರಿಗೆ ಹಾಗೂ ಟಿವಿ ಮಾಧ್ಯಮದವರಿಗೆ ದಿನಸಿ ಕಿಟ್, ಮಾಸ್ಕ್ ವಿತರಣೆ.

Spread the love

ಲಿಂಗಸೂಗೂರ,ಹಗಲಿರುಳು ಎನ್ನದೆ ಶ್ರಮಿಸುವ ಪತ್ರಕತ೯ರಿಗೆ ಹಾಗೂ ಟಿವಿ ಮಾಧ್ಯಮದವರಿಗೆ ದಿನಸಿ ಕಿಟ್, ಮಾಸ್ಕ್ ವಿತರಣೆ.

ಲಿಂಗಸುಗೂರು: ಜೂ 06, ಪಟ್ಟಣದ ಕಾಯ೯ನಿರತ ಪತ್ರಿಕೆ ಭವನದಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ ಅಭಿಮಾನಿಗಳ ಬಳಗ ಹಾಗೂ ನಿತಿನ್ ಡವೆಲಪರಸ್, ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ಲಿಂಗಸುಗೂರು ಇವರ ವತಿಯಿಂದ ತಾಲೂಕಿನ ಪತ್ರಿಕೆ, ಟಿವಿ ಮಾಧ್ಯಮದವರಿಗೆ ದಿನಸಿ ಕಿಟ್‌ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.  ನಿತಿನ್ ಡೆವೆಲಪರ್ಸ ಮುಖ್ಯಸ್ಥ ಚೆನ್ನುಕುಮಾರ ಮಾತನಾಡಿ ದೇಶಾದ್ಯಂತ ಮಹಾಮಾರಿ ಕೋವಿಡ 19 ಎರಡನೇ ಅಲೆಯ ಅಬ್ಬರಲ್ಲಿ ಇಡೀ ದೇಶವೆ ತಲ್ಲಣಗೊಂಡಿದೆ. ಇದರಿಂದ ಬಹಳಷ್ಟ ಬಡಕುಟುಂಬಗಳು ಬೀದಿ ಪಾಲಾಗಿವೆ, ಇಂತಹ ಸಮಯದಲ್ಲಿ ತಾಲೂಕಿನ ಪತ್ರಿಕಾ ಹಾಗೂ ಟಿ.ವಿ ಮಾಧ್ಯಮದವರು ಹಗಲಿರಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸ, ಜೀವದ ಭಯವಿಲ್ಲದೇ ಯಾವ ಸಂಬಳವಿಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ಮಾಧ್ಯಮದವರಿಗೆ ನಮ್ಮೆಲ್ಲರ ಪರವಾಗಿ ಒಂದು ಸೇಲೂಟ್ ಎಂದರು. ಕೋವಿಡ್ ಲಾಕ್ ಡೌನ್ ಪ್ರಯುಕ್ತ ಎಲ್ಲಾ ಹೋಟೆಲ್‌ ಹಾಗೂ ಖಾನಾವಳಿ ಬಂದ ಇರುವ ಕಾರಣ ಪಟ್ಟಣದ ಸರಕಾರಿ, ಖಾಸಗಿ ಆಸ್ಪತ್ರೆಯ ರೋಗಿಗಳಗೆ ಮತ್ತು ಕೋರೋನ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ, ಅನಾಥರಿಗೆ ಮಾನಸಿಕ ಅಸ್ಥವೆಸ್ಥಥರಿಗೆ, ನಿರ್ಗತಿಕರಿಗೆ ಮತ್ತು ಅಲೆಮಾರಿ ಕುಟುಂಗಳಿಗೆ, ಭಿಕ್ಷಕರಿಗೆ ಸತತವಾಗಿ 22 ದಿನಗಳಿಂದ ಊಟ, ನೀರು, ಹಾಗೂ ಹಣ್ಣುಗಳನ್ನು ಹಂಚುತ್ತೇವೆ, ಮುಂದೆಯು ಸಹ ಲಾಕಡೌನ್ ಮುಗಿಯುವವರಿಗೂ ನಮ್ಮ ಕಾರ್ಯನಿರಂತರವಾಗಿ ಮುಂದುವರಿಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯಸ್ಥರು ಚೆನ್ನುಕುಮಾರ, ಹಣ್ಣು ವ್ಯಾಪಾರಿ ಮಹ್ಮದ್ ಇಸ್ಮಾಯಿಲ್, ಮಂಜುನಾಥ ವಕೀಲರು, ನಾಗರಾಜ ಕಾನೇಳ್ ಇನ್ನಿತರರು ಇದ್ದರು.

ವರದಿ – ಸಂಪಾದಕರು

Leave a Reply

Your email address will not be published. Required fields are marked *