ಸೌಜನ್ಯ: ಕೇವಲ ಹೆಸರಲ್ಲ, ಅದು ನ್ಯಾಯಕ್ಕಾಗಿ ಹೊತ್ತಿದ ಜೀವಂತ ಜ್ವಾಲೆ!

Spread the love

ಸೌಜನ್ಯ: ಕೇವಲ ಹೆಸರಲ್ಲ, ಅದು ನ್ಯಾಯಕ್ಕಾಗಿ ಹೊತ್ತಿದ ಜೀವಂತ ಜ್ವಾಲೆ!

ಸೌಜನ್ಯ… ಈ ಹೆಸರನ್ನು ಕೇಳಿದಾಗ ನಮ್ಮ ಎದೆಯಾಳದಲ್ಲಿ ಒಂದು ಕಂಪನ. ಅದು ನೋವಿನ ಕಂಪನ, ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶದ ಕಂಪನ, ಮತ್ತು ನ್ಯಾಯಕ್ಕಾಗಿ ಅಚಲವಾಗಿ ನಿಲ್ಲುವ ಸಂಕಲ್ಪದ ಕಂಪನ.  ಸೌಜನ್ಯ, ನೀನು ನಮ್ಮಿಂದ ದೈಹಿಕವಾಗಿ ದೂರವಾಗಿದ್ದರೂ, ನಮ್ಮ ಹೃದಯದ ಪ್ರತಿ ಬಡಿತದಲ್ಲೂ ನೀನು ಜೀವಂತವಾಗಿದ್ದೀಯೆ. ನಮ್ಮ ನಡುವೆಯೇ, ನಮ್ಮೊಳಗೇ ನೀನು ಪ್ರೇರಣೆಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚೆದೆಯ ಧ್ವನಿಯಾಗಿದ್ದೀಯೆ.

ನಿನ್ನ ಮೇಲಾದ ಕ್ರೂರ ಕೃತ್ಯ, ಎಷ್ಟೋ ಮನಸ್ಸುಗಳನ್ನು ಕಲಕಿದೆ. “ಮನುಷ್ಯ ರೂಪದ ರಾಕ್ಷಸರಿಗೆ” ನರಕವನ್ನು ತೋರಿಸುವ ನಮ್ಮ ಹೋರಾಟಕ್ಕೆ ನೀನೇ ದಾರಿ ದೀಪ. ನಿನ್ನಂತಹ ಅಮಾಯಕ ಜೀವಕ್ಕೆ ಅನ್ಯಾಯವಾದಾಗ, ಇಡೀ ಸಮಾಜ ತಲೆತಗ್ಗಿಸಿತು. ಆದರೆ, ನಿನ್ನ ಕಥೆ ಕೇವಲ ದುರಂತವಾಗಿ ಉಳಿಯಲಿಲ್ಲ. ಅದು ಸ್ಫೂರ್ತಿಯಾಯಿತು, ಶಕ್ತಿಯಾಯಿತು. ನಿನ್ನ ಪ್ರೇರಣೆಯಿಂದ ಅದೆಷ್ಟೋ ಜನ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಧೈರ್ಯ ತುಂಬಿಕೊಂಡರು. ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಘನತೆ ಮತ್ತು ಪ್ರಾಣವನ್ನು ಉಳಿಸಿಕೊಳ್ಳಲು ನಿನ್ನ ಹೋರಾಟದಿಂದ ಪಾಠ ಕಲಿತರು. ಇಂದು ನಮಗೆ ಸ್ಪಷ್ಟವಾಗಿ ಅರಿವಾಗಿದೆ. ಸೌಜನ್ಯ ಕೇವಲ ಒಬ್ಬ ವ್ಯಕ್ತಿಯಲ್ಲ, ಸೌಜನ್ಯ ಒಂದು ಶಕ್ತಿ! ಅನ್ಯಾಯದ ವಿರುದ್ಧ ಸಿಡಿದೆದ್ದ ಪ್ರತಿಯೊಬ್ಬರ ಧ್ವನಿಯಲ್ಲಿ ನೀನಿದ್ದೀಯೆ. ಸತ್ಯ ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ. ಅದು ನಿಧಾನವಾಗಿಯಾದರೂ, ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ. ನ್ಯಾಯದ ಹೆಜ್ಜೆಗಳು ಹತ್ತಿರವಾಗುತ್ತಿವೆ. ಸೌಜನ್ಯಳ ಆತ್ಮಕ್ಕೆ ನಿಜವಾದ ಶಾಂತಿ ಸಿಗಬೇಕೆಂದರೆ, ಆ ಘೋರ ಕೃತ್ಯ ಎಸಗಿದ ರಾಕ್ಷಸರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಆ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ, ನಿರಂತರವಾಗಿ ಹೋರಾಡುತ್ತಿದ್ದೇವೆ. ಸೌಜನ್ಯಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. #ಜಸ್ಟಿಸ್_ಫಾರ್_ಸೌಜನ್ಯ ಗಣೇಶ್ ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ದಾವಣಗೆರೆ.

Leave a Reply

Your email address will not be published. Required fields are marked *