ತಾವರಗೇರಾ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ರಂಗಧಾರ ರೆಪರ್ಟರಿ,

Spread the love

ತಾವರಗೇರಾ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ರಂಗಧಾರ ರೆಪರ್ಟರಿ,

ಕೊಪ್ಪಳ ಇವರ ಸಹಯೋಗದಲ್ಲಿ ಶನಿವಾರ ಪಟ್ಟಣ ಬುದ್ಧವಿಹಾರದಲ್ಲಿ ಒಂದು ತಿಂಗಳ ಉಚಿತ ರಂಗ ತರಬೇತಿ ಶಿಬಿರ ಉದ್ಘಾಟನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯುವಕರು ಟಿವಿ, ಮೋಬೈಲ್. ಸಿನಿಮಾಗಳಲ್ಲಿ ಅತಿ ಹೆಚ್ಚು ಒಲವು ತೋರಿಸುತ್ತಿರುವುದರಿಂದ ನಾಟಕ ಹಾಗೂ ರಂಗಭೂಮಿ ಕಲೆಗಳು ನಶಿಸಿ ಹೊಗುತ್ತಿವೆ ಗ್ರಾಮೀಣ ಭಾಗದ ಹಾಗೂ ಪಟ್ಟಣ ಪ್ರದೇಶ ಯುವಕರು ಇಂತಹ ನಾಟಕ ಮತ್ತು ರಂಗ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆಯಲು ಮುಂದಾಗಬೇಕು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಆದ್ದರಿಂದ ಯುವಕರು ಈ ಕಾರ್ಯಕ್ಕೆ ಮುಂಬಾಗಬೇಕು ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಚಾಂದಪಾಷ ಕಿಲ್ಲೇದಾರ ಮಾತನಾಡಿದರು.
ಪಿಯುಸಿ ಪಠ್ಯ ಪುಸ್ತಕಗಳಲ್ಲಿರುವ ವಿಷಯಾಧರಿತ ಹಾಗೂ ಇಂದಿನ ಸಮಾಜಕ್ಕೆ ಬೇಕಾಗಿರುವ ಸಂಪನ್ಮೂಲ ವಿಷಯಗಳಿಗೆ ಅನುಗುಣವಾಗಿ ಈ ರಂಗ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ರಾಜ್ಯ ನಾನಾ ಜಿಲ್ಲೆಗಳಿಂದ ಬಂದತಹ ಶಿಬಿರಾರ್ತಿಗಳು ಈ ಶಿಬಿರಲ್ಲಿ ತರಬೇತಿಯನ್ನು ಪಡೆಯುವದು ನಿಮ್ಮ ಜೀವನದ ಅತ್ಯಮೂಲ್ಯ ಘಟ್ಟವಾಗಿದೆ ಎಂದು ಕಾರ್ಯಕ್ರಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿ ಪ್ರಾಧ್ಯಾಪಕಾರ ಡಾ|| ಸುಭಾಶ ಪೋರೆ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಎಮ್.ಡಿ ರಫೀ. ಮಾನವ ಬಂದುತ್ವ ವೇದಿಕೆಯ ರಾಮಣ್ಣ ಬೆರ‍್ಗಿ, ಬೇಟ್ಟಪ್ಪ ಯತ್ನಟ್ಟಿ. ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ರಂಗಧಾರ ರೆಪರ್ಟರಿಯ ಅಧ್ಯಕ್ಷರಾದ ಶರಣು ಶೇಟ್ಟರ್ ಅವರು ಮಾತನಾಡಿದರು. ಶಿಬಿರದ ತರಬೇತುದಾರರಾದ ಲಕ್ಷಮಣ ಪೀರಗಾರ ಅವರು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *