ಸರ್ವ ಧರ್ಮಗಳ ಸಾರ ಸೌಹಾರ್ದತೆ. ಮಾನವೀಯತೆಯಾಗಿದೆ – ಸುಫ್ಯಾನ್ ಸಖಾಫಿ ಅಲ್ ಹಿಕಮಿ.
ಕೊಪ್ಪಳ: ಸರ್ವ ಧರ್ಮಗಳ ಸಾರ ಸೌಹಾರ್ದತೆ ಮತ್ತು ಮಾನವೀಯತೆಯಾಗಿದೆ ಎಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ರಾಜ್ಯಾಧ್ಯಕ್ಷ ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಹೇಳಿದರು.
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ವತಿಯಿಂದ ರಾಜ್ಯಾದ್ಯಂತ ನಡೆಸುತ್ತಿರುವ ‘ಸೌಹಾರ್ದ ನಡಿಗೆ’ ಜಾಥಾ ಶುಕ್ರವಾರ ಕೊಪ್ಪಳ ನಗರಕ್ಕೆ ತಲುಪಿದ್ದು. ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ಕನಕ ದಾಸ ವೃತ್ತದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮಕ್ಕೆ ಕೊಪ್ಪಳ ತಾಲೂಕಿನ ಬಿಸರಹಳ್ಳಿಯ ಶ್ರೀ ಮರುಳಸಿದ್ದೇಶ್ವರ ಮಠ ಸುಕ್ಷೇತ್ರದ ಪರಪೂಜ್ಯ ಶ್ರೀ ಮಳಿಯಯ್ಯ ಸ್ವಾಮಿಗಳು ಚಾಲನೆ ನೀಡಿದರು. ಅಶೋಕ ವೃತ್ತ ತಲುಪಿದ ಬಳಿಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ರಾಜ್ಯಾಧ್ಯಕ್ಷ ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮುಂದುವರೆದು ಮಾತನಾಡಿ ರಾಜ್ಯದ 20ಜಿಲ್ಲೆಗಳಲ್ಲಿ ನಡೆಯುತ್ತಿರುವ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಸ್ವಾಮೀಜಿಗಳು.ಕ್ರೈಸ್ತ ಫಾದರ್ಗಳು.ಮುಸ್ಲಿಮ್ ಧರ್ಮ ಗುರುಗಳು ಹಾಗೂ ಇನ್ನಿತರ ಪ್ರಮುಖ ಜನಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲಿಸುತ್ತಿದ್ದಾರೆ.ಈ ಕರುನಾಡು ಭಾವೈಕ್ಯತೆಯ ಪರಂಪರೆಯುಳ್ಳ ನಾಡು. ಆದರೆ ಸ್ವಾರ್ಥ ರಾಜಕೀಯಕ್ಕಾಗಿ ಧರ್ಮಗಳೆಡೆಯಲ್ಲಿ ವೈಷಮ್ಯದ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ನಾವೆಲ್ಲರೂ ಒಟ್ಟಾಗಿ ಸೌಹಾರ್ದ ನಾಡಿನ ಪರಂಪರೆಯನ್ನು ಉಳಿಸ ಬೇಕಾಗಿದೆ. ಅದಕ್ಕಾಗಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೊಪ್ಪಳ ತಾಲೂಕಿನ ಬಿಸರಹಳ್ಳಿಯ ಶ್ರೀ ಮರುಳಸಿದ್ದೇಶ್ವರ ಮಠ ಸುಕ್ಷೇತ್ರದ ಪರಪೂಜ್ಯ ಶ್ರೀ ಮಳಿಯಯ್ಯ ಸ್ವಾಮಿಗಳು ಮಾತನಾಡಿ ದೇಶ ಅಶಾಂತಗೊಂಡಿದೆ. ಜಾತಿ ಜಾತಿ ಗಲಭೆ.ಘರ್ಷಣೆಗಳಿಗೆ ಜಾತಿಗಳಲ್ಲಿರುವ ಭಿನ್ನಾಭಿಪ್ರಾಯ ಕಾಣುತ್ತದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡಿತಾ ಇದೆ. ಭಿನ್ನಾಭಿಪ್ರಾಯಗಳಿಂದ ನಾವು ಆ ಜಾತಿ ಈ ಜಾತಿ ನಾವು ಮೇಲೂ ಕೆಳಗೆ ಶ್ರೇಷ್ಠ ಕನಿಷ್ಠ ಎಂಬ ವಿಚಾರ ಇಟ್ಟುಕೊಂಡು ಕೊಲೆ ಸುಲಿಗೆ ದರೋಡೆ ನಡೀತಾ ಇದೆ.ಗಲಭೆ ಸಂಘರ್ಷ ಹೆಚ್ಚಾಗಾಲು ನಮ್ಮಲ್ಲಿ ವ್ಯತ್ಯಾಸವಿದೆ. ಮರಳು ಸಿದ್ದಯ್ಯ ಹೇಳಿದ ಹಾಗೆ 12ನೇ ಶತಮಾನದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದ್ದಾರೆ. ನಾವೆಲ್ಲರೂ ಮಾನವರೇ ಅಥವಾ ಮಾನವ ಬಿಟ್ಟು ಬೇರೆ ಬೇರೆ ಜಾತಿ ಆದವ ಗೊತ್ತಿಲ್ಲ. ನಮ್ಮ ಶರಣ ಪರಂಪರೆಯಲ್ಲಿ ಮಾನವ ಧರ್ಮ ಅಂದರೆ ಶ್ರೇಷ್ಠ ಅದಕ್ಕೆ ನಾವೆಲ್ಲರೂ ಸಮಾನರೇ. ನಾವು ಹೊಂದಾಣಿಕೆ ಮಾಡಿಕೊಂಡು ಸಮಾನತೆಯನ್ನು ಸಾರಬೇಕು. ಹಿಂದೂ ಮುಸ್ಲಿಂ ಕ್ರೈಸ್ತ ನಾವೆಲ್ಲರೂ ಒಂದೇ ಕುಟುಂಬ ಇದ್ದಂತೆ ಒಂದಾಗಿ ಬಾಳಬೇಕು. ಎಲ್ಲಾ ಧರ್ಮ ಜಾತಿಗಳು ಒಂದಾಗಿ ಬಾಳಿದರೆ ದೇಶ ಶಾಂತವಾಗಿರಲು ಸಾಧ್ಯ ಎಂದು ನುಡಿದರು.
ಭ್ರಾತೃತ್ವ ಸಮಿತಿ ಸಂಸ್ಥಾಪಕ ಹಾಗೂ ಹೈಕೋರ್ಟ್ ವಕೀಲರಾದ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ ದೌರ್ಜನ್ಯಕ್ಕೊಳಗಾದವರೇ ಶಾಂತಿ ಸಂದೇಶ ಸಾರುವ ನಿಟ್ಟಿನಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಸುತ್ತಿರುವುದು ವಿಶೇಷವಾಗಿದೆ ಎಂದು ಶ್ಲಾಘಿಸಿದರು.
ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ ತನ್ನಲ್ಲಿ ಒಂದು ರೊಟ್ಟಿ ಇದ್ದರೆ ಪಕ್ಕದ ಯಾವುದೇ ಜಾತಿಯ ಮನೆಯವರು ಇರಲಿ ಅವರಿಗೆ ಒಂದು ತುಂಡು ಹಂಚಿ ತಿನ್ನಬೇಕು ಎಂದು ಕ್ರೈಸ್ತ ಧರ್ಮ ಹೇಳುತ್ತದೆ. ಈಗಿನ ದಿನಗಳಲ್ಲಿ ಎಲ್ಲಾ ಧರ್ಮದವರು ಒಂದಾಗಿ ಸೌಹಾರ್ದತೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ ಸಮಾಜದಲ್ಲಿ ಯಾರೊಬ್ಬರೂ ಇನ್ನೊಂದು ಧರ್ಮದ ಜನರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡು ಅಶಾಂತಿಯನ್ನು ಹುಟ್ಟು ಹಾಕುತ್ತಾರೆ ಅಂತಹ ಕೆಟ್ಟ ಕ್ರಿಮಿಗಳನ್ನು ಮಟ್ಟ ಹಾಕುವ ಮೂಲಕ ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಅಗತ್ಯವಿದೆ ಎಂದು ಹೇಳಿದರು.
ವಿಜಯ್ ಅಮೃತ್ ರಾಜ್ ವಕೀಲರು ಮಾತನಾಡಿ ಮನುಷ್ಯ ಬುದ್ಧಿಜೀವಿ ಇದ್ದರೆ ಸಾಕು.ಅತಿ ಬುದ್ಧಿಜೀವಿ ಆಗುವ ಅವಶ್ಯಕತೆ ಇಲ್ಲ ನಾವೆಲ್ಲರೂ ಒಟ್ಟಿಗೆ ಬಾಳೋಣ ಅದರಲ್ಲಿ ಸುಖ ಶಾಂತಿ ನೆಮ್ಮದಿ ಇದೆ ಅಂತ ಹಿರಿಯರು ತೋರಿಸಿಕೊಟ್ಟಿದ್ದಾರೆ. ಮತ್ತೆ ನಾವು ವೇಗವನ್ನು ಕಡಿಮೆ ಮಾಡಿಕೊಂಡು ಮಾನವೀಯತೆಯಡೆಗೆ ನಡೆಯೋಣ ಎಂದು ನುಡಿದರು.
ಮುಖಂಡ ಸಂಜಯ್ ದಾಸ್ ಕೌಜಗೇರಿ. ಗಂಗಾವತಿಯ ಬಿ.ರಾಮಣ್ಣ ಮಾತನಾಡಿದರು. ಕರ್ನಾಟಕ ಮುಸ್ಲಿಮ್ ಜಮಾಅತ್ ಸಂಚಾಲಕ ಕರೀಮ್ ಪಾಶಾ ಗಚ್ಚಿನ ಮನಿ. ನಜೀರ್ ಬೇಗ್. ರಾಮಲಿಂಗಯ್ಯ ಶಾಸ್ತ್ರಿ ಮಠ. ಗಾಳೆಪ್ಪ ಮುಂಗೋಲಿ. ದರ್ಪಣ ಸಂಸ್ಥೆಯ ಕಾರ್ಯಕರ್ತ ಗಾಳಪ್ಪ.ನಿಜಾಮ್ ಹಾಶ್ಮಿ ಬಾಜಪೆ. ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ. ಮೊಹಮ್ಮದ್ ರಾಶೀದ್ ಖಾಝಿ ಮುಂತಾದವರು ಭಾಗವಹಿಸಿದ್ದರು.ಮೌಲಾನಾ ಅಲ್ತಾಫ್ ಸಖಾಫಿ ಸ್ವಾಗತಿಸಿದರು.ಕೊನೆಯಲ್ಲಿ ನಾಸಿರ್ ಸಖಾಫಿ ವಂದಿಸಿದರು.