ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ಕಾರ್ಯಾಕ್ರಮ ಯಶಸ್ವಿ.

Spread the love

ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ಕಾರ್ಯಾಕ್ರಮ ಯಶಸ್ವಿ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇಂದು ನಡೆದ ಬಕ್ರೀದ್ ಹಬ್ಬದ ಶಾಂತಿ ಸಭೆ ಕಾರ್ಯಾಕ್ರಮ ಯಶಸ್ವಿ. ಈ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮಾನ್ ನಾಗರಾಜ್ ಕೋಟಗಿ ಪಿ.ಎಸ್.ಐ. ಯವರು ಈ ಶಾಂತಿ ಸಭೆಯ ನಿಮಿತ್ಯವಾಗಿ ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿದೆ. ಅದರಿಂದ ಬಕ್ರೀದ ಹಬ್ಬವನ್ನ ಶಾಂತರೀತಿಯಿಂದ ಮುಗಿಸಬೇಕು ಎಂದು ಈ ವಿಶೇಷ ಹಬ್ಬದ ಕುರಿತು ಸ್ವ ವಿಸ್ತಾರವಾಗಿ ವಿವರಣೆ ನೀಡಿದರು. ಜೊತೆಗೆ ಊರಿನ ಮುಖಂಡರಾದ ಶ್ರೀ ಬಸವನಗೌಡ ಮಾಲಿ ಪಾಟೀಲ್ ರವರು ತಾವರಗೇರಾ ಪಟ್ಟಣದಲ್ಲಿ ನಡೆಯುವ ಈ ಬಕ್ರೀದ್ ಹಬ್ಬವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಂತ ರೀತಿಯಿಂದ ನಡೆಯುತ್ತದೆ. ಯಾಕೆಂದರೆ ಪಟ್ಟಣದಲ್ಲಿ ಶಾಂತಿ ಸೌಹಾರ್ದತೆಯಿಂದ ಇರುವ ಈ ಊರು ಇಲ್ಲಿ ಯಾವುದೇ ಅ ಹಿತಕರ ಘಟನೆಗಳು ನಡೆದಿರುವುದಿಲ್ಲ. ಜೊತೆಗೆ ಮುಸ್ಲಿಂ ಹಬ್ಬಕ್ಕೆ ನಮ್ಮ ಸಹಕಾರ ಸದಾ ಇರುತ್ತೆ ಎಂದರು. ತದ ನಂತರ ಈ ತ್ಯಾಗ ಬಲಿದಾನದ ಬಕ್ರೀದ್ ಹಬ್ಬದ ನಿಮಿತ್ಯ ತಾವರಗೇರಾ ಪಟ್ಟಣದ ಇತಿಹಾಸದಲ್ಲೇ ಮುಸ್ಲಿಂ ಮತ್ತು ಹಿಂದೂಗಳ ನಡುವೆ ಯಾವುದೇ ಗಲಾಟೆಗಳು ನಡೆದಿರುವುದಿಲ್ಲ. ಮತ್ತೆ ಈ ಪಟ್ಟಣವು ಜಿಲ್ಲೆಗೆ ಶಾಂತಿಯ ತೋಟವಾಗಿದೆ ಎಂದು ಬಸವರಾಜ್ ಪಾಟೀಲ ರವರು ತಿಳಿಸಿ ಕೊನೆಗೆ ವಂದನಾರ್ಪಣೆ ಮಾಡಿದರು. ಈ ಶಾಂತಿ ಸಭೆಯ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಊರಿನ ವಿವಿಧ ಸಂಘಟನೆಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಶಾಂತಿ ಸಭೆ ಕಾರ್ಯಕ್ರಮವನ್ನ ಯಶಸ್ವಿಗೊಳಿಸಲಾಯಿತು.
ವರದಿ :- ಸಂಪಾದಕಿಯ

Leave a Reply

Your email address will not be published. Required fields are marked *