ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ಕಾರ್ಯಾಕ್ರಮ ಯಶಸ್ವಿ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇಂದು ನಡೆದ ಬಕ್ರೀದ್ ಹಬ್ಬದ ಶಾಂತಿ ಸಭೆ ಕಾರ್ಯಾಕ್ರಮ ಯಶಸ್ವಿ. ಈ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮಾನ್ ನಾಗರಾಜ್ ಕೋಟಗಿ ಪಿ.ಎಸ್.ಐ. ಯವರು ಈ ಶಾಂತಿ ಸಭೆಯ ನಿಮಿತ್ಯವಾಗಿ ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿದೆ. ಅದರಿಂದ ಬಕ್ರೀದ ಹಬ್ಬವನ್ನ ಶಾಂತರೀತಿಯಿಂದ ಮುಗಿಸಬೇಕು ಎಂದು ಈ ವಿಶೇಷ ಹಬ್ಬದ ಕುರಿತು ಸ್ವ ವಿಸ್ತಾರವಾಗಿ ವಿವರಣೆ ನೀಡಿದರು. ಜೊತೆಗೆ ಊರಿನ ಮುಖಂಡರಾದ ಶ್ರೀ ಬಸವನಗೌಡ ಮಾಲಿ ಪಾಟೀಲ್ ರವರು ತಾವರಗೇರಾ ಪಟ್ಟಣದಲ್ಲಿ ನಡೆಯುವ ಈ ಬಕ್ರೀದ್ ಹಬ್ಬವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಂತ ರೀತಿಯಿಂದ ನಡೆಯುತ್ತದೆ. ಯಾಕೆಂದರೆ ಪಟ್ಟಣದಲ್ಲಿ ಶಾಂತಿ ಸೌಹಾರ್ದತೆಯಿಂದ ಇರುವ ಈ ಊರು ಇಲ್ಲಿ ಯಾವುದೇ ಅ ಹಿತಕರ ಘಟನೆಗಳು ನಡೆದಿರುವುದಿಲ್ಲ. ಜೊತೆಗೆ ಮುಸ್ಲಿಂ ಹಬ್ಬಕ್ಕೆ ನಮ್ಮ ಸಹಕಾರ ಸದಾ ಇರುತ್ತೆ ಎಂದರು. ತದ ನಂತರ ಈ ತ್ಯಾಗ ಬಲಿದಾನದ ಬಕ್ರೀದ್ ಹಬ್ಬದ ನಿಮಿತ್ಯ ತಾವರಗೇರಾ ಪಟ್ಟಣದ ಇತಿಹಾಸದಲ್ಲೇ ಮುಸ್ಲಿಂ ಮತ್ತು ಹಿಂದೂಗಳ ನಡುವೆ ಯಾವುದೇ ಗಲಾಟೆಗಳು ನಡೆದಿರುವುದಿಲ್ಲ. ಮತ್ತೆ ಈ ಪಟ್ಟಣವು ಜಿಲ್ಲೆಗೆ ಶಾಂತಿಯ ತೋಟವಾಗಿದೆ ಎಂದು ಬಸವರಾಜ್ ಪಾಟೀಲ ರವರು ತಿಳಿಸಿ ಕೊನೆಗೆ ವಂದನಾರ್ಪಣೆ ಮಾಡಿದರು. ಈ ಶಾಂತಿ ಸಭೆಯ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಊರಿನ ವಿವಿಧ ಸಂಘಟನೆಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಶಾಂತಿ ಸಭೆ ಕಾರ್ಯಕ್ರಮವನ್ನ ಯಶಸ್ವಿಗೊಳಿಸಲಾಯಿತು.
ವರದಿ :- ಸಂಪಾದಕಿಯ