ಮುಧೋಳ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ.
ಯುಬುರ್ಗಾ : ತ್ಯಾಗ, ಬಲಿದಾನಗಳ ಸಂಕೇತ ವಾದ ಬಕ್ರೀದ್ ಹಬ್ಬವನ್ನು ತಾಲೂಕಿ ನಾದ್ಯಂತ ಮುಸ್ಲಿಂ ಭಾಂದವರು ಶ್ರದ್ದೆ ಭಕ್ತಿಯಿಂದ ಬಕ್ರೀದ್ ಹಬ್ಬ ವನ್ನು ಆಚರಿಸಿದರು.
ತಾಲೂಕಿನ ಮುಧೋಳ ಗ್ರಾಮದ ಮುಸ್ಲಿಂ ಬಾಂಧವರೆಲ್ಲರೂ ಸೇರಿ ಶನಿವಾರ ಮುಂಜಾನೆ ಸಮಯದಲ್ಲಿ ಹಜರತ್ ಸೈಯದ್ ಶಾವಲಿ ಕಮಿಟಿಯವರು ಹಾಗೂ ಮೆಹಬೂಬ್ ಸುಭಾನಿ ಸಮಾಜದ ಕಮಿಟಿಯವರು ಮತ್ತು ಸುತ್ತ ಮುತ್ತಲಿನ ಗ್ರಾಮದವರೆಲ್ಲರೂ ಸೇರಿಕೊಂಡು ಹಜರತ್ ಸೈಯದ್ ಶಾವಲಿ ದರ್ಗಾದ ಹತ್ತಿರ ಎಲ್ಲರೂ ಸೇರಿ ಕೊಂಡು ಅಲ್ಲಾಹನ ನಾಮ ಸ್ಮರಣೆ ಮಾಡುತ್ತಾ ಈದ್ಗಾ ಮೈದಾನದವರೆಗೆ ಕಾಲುನಡಿಗೆಯ ಮೂಲಕ ಸಾಗಿದರು.
ಮುಸ್ಲಿಂ ಸಮಾಜದ ಧರ್ಮ ಗುರುಗಳಾದ ಯಲಬುರ್ಗಾದ ಪಟ್ಟಣದ ಅಬ್ದುಲ್ ಖಾದರ್ ಖಾಜಿ ಅವರು ಮಾತನಾಡಿ, ನಾಡಿನಲ್ಲಿ ಶಾಂತಿ, ಸೌಹಾರ್ದತೆ ಬೆಳಗಲಿ, ಎಲ್ಲರಿಗೂ ಅಲ್ಲಾಹನು ಸುಖ ಸಂತೋಷ, ಸಮೃದ್ಧಿ, ಆರೋಗ್ಯ ಕರುಣಿಸಲಿ ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಹಾಗೂ ಅಲ್ಲಾಹನ ಮೇಲಿನ ಬಲವಾದ ನಂಬಿಕೆಯಿಂದ ಮಾಡಿದ ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಸ್ಮರಣಾರ್ಥ ದೇಶಾದ್ಯಂತ ಮುಸ್ಲಿ ಮರಲ್ಲಿ ಆಚರಿಸಲಾಗುವ ಹಬ್ಬ ಇದು ಎಂದು ಪ್ರಾರ್ಥಿಸಿದರು.
ಹಜರತ್ ಸಯ್ಯದ್ ಶಾವಲಿ ಅಂಜುಮನ್ ಕಮಿಟಿಯ ಹಜರತ್ತರಾದ ಅಮಿರ ಬನ್ನೂರ ಅವರು ಮಾತನಾಡಿ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಬೆಳಗಲಿ, ಅಲ್ಲಾಹನು ಸುಖ, ಸಂತೋಷ, ಸಮೃದ್ಧಿ ಆರೋಗ್ಯವನ್ನು ಕರುಣಿಸಲಿ ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಭೋಧನೆ ಮಾಡಿದರು,
ನಂತರ ನಮಾಜ್ ಮುಗಿದ ಮೇಲೆ ಮುಸ್ಲಿಂ ಬಾಂದವರು ಬಕ್ರೀದ್ ಹಬ್ಬದ ನಿಮಿತ್ಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಮುಗಿದ ಬಳಿಕ ಮುಸ್ಲಿಂ ಬಾಂಧವರೆಲ್ಲರೂ ಸೇರಿ ಕೊಂಡು ಪರಸ್ಪರ ಅಪ್ಪಿಕೊಂಡು ಬಕ್ರೀದ್ ಹಬ್ಬದ ಶುಭಾಶಯವನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿ ಕೊಂಡರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ಸಯ್ಯದ್ ಚೇರಮನ್, ಮೌಲಾಸಾಬ ಮೊತೇಖಾನ್, ಹಸೇನಸಾಬ್ ಹಿರೇಮನಿ (ವಕೀಲರು) ಗ್ರಾಂ ಪಂ ಸದಸ್ಯ ಖಾದಿರಬಾಷಾ ತೋಳಗಲ್, ಇಮಾಮ್ ಹುಸೇನ್ ಹಿರೇಮನಿ, ಲಾಲಸಾಬ್ ಆರಬಳ್ಳಿನ. ಕಬೀರಸಾಬ ಗಡಾದ, ಹುಸೇನ್ ಸಾಬ್ ಕಿನ್ನಾಳ, ಗುಡುಸಾಬ ರಾಟಿ, ಸಯ್ಯದ್ ಹಿರೇಮನಿ ಸಿಳ್ಳಿನ. ಬಾಷುಸಾಬ ಆರಬಳ್ಳಿನ ಗ್ರಾಂ ಪಂ ಸದಸ್ಯ. ಇನ್ನು ಹಲವಾರು ಸಮಾಜದ ಹಿರಿಯರು, ಹಾಗೂ ಯುವಕ ಮಿತ್ರರು ಸಮಾಜದ ಸರ್ವ ಸದಸ್ಯರೆಲ್ಲರೂ ಹಿರಿಯರು ಯುವಕರು ಎಲ್ಲರೂ ಪುಟಾಣಿ ಮಕ್ಕಳು ಸೇರಿದಂತೆ ಭಾಗವಹಿಸಿದ್ದರು.