ಯುವಜನೋತ್ಸವ: “ಧಾರವಾಡದ ಧ್ರುವತಾರೆ”  ಕುಮಾರ. ಶ್ರೀಧರ ಶಿವಾನಂದ ಭಜಂತ್ರಿ ಅವರಿಗೆ  ಚಿನ್ನದ ಪದಕ,

Spread the love

ಯುವಜನೋತ್ಸವ: “ಧಾರವಾಡದ ಧ್ರುವತಾರೆ”  ಕುಮಾರ. ಶ್ರೀಧರ ಶಿವಾನಂದ ಭಜಂತ್ರಿ ಅವರಿಗೆ  ಚಿನ್ನದ ಪದಕ,

ಧಾರವಾಡ : ಕರ್ನಾಟಕ ವಿಶ್ವ ಮಹಾವಿದ್ಯಾಲಯದಲ್ಲಿ ನಡೆದ  ಯುವ ಜನೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ,ಮೈಸೂರು ವಿಶ್ವ ವಿದ್ಯಾಲಯದ ಯುವಜನೋತ್ಸವದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು  ಚಿನ್ನದ ಪದಕ,ಪಂಜಾಬ್‌ನ ಲೂಧಿಯಾನಾದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ  ಕರ್ನಾಟಕ ಕಲಾ ಮಹಾವಿದ್ಯಾಲಯದ ಡಾ. ಗಂಗೂಬಾಯಿ ಸಂಗೀತ ವಿಭಾಗದ ಶ್ರೀಧರ ಶಿವಾನಂದ ಭಜಂತ್ರಿ ವಿದ್ಯಾರ್ಥಿ  ಹಿಂದೂಸ್ತಾನಿ ಶಹನಾಯಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಶ್ರೀಧರ ಈ ಹಿಂದೆ ಮೈಸೂರು ಮತ್ತು ಧಾರವಾಡದಲ್ಲಿ ನಡೆದಿದ್ದ ರಾಜ್ಯ ಮತ್ತು ಅಂತ‌ರ್ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಕರ್ನಾಟಕ ವಿಶ್ವ ವಿದ್ಯಾಲಯದ   ಕುಲಪತಿಗಳಾದ ಡಾ.ಕೆ. ಬಿ. ಗುಡಸಿ ಸರ್, ಹಾಗೂ ಗಂಗೂಬಾಯಿ ಸಂಗೀತ ವಿಭಾಗದ ಪ್ರಾಂಶುಪಾಲರಾದ ಡಾ.ಎಂ. ಎಚ್. ಅಗಡಿ ಗುರುಗಳು ಹಾಗೂ ಪಂಡಿತ್. ಬಸವರಾಜ. ಟಿ. ಭಜಂತ್ರಿ (ಹೆಡಿಗೊಂಡ )ಗುರುಗಳು, ಹಾಗೂ ನನ್ನ ಸಂಬಂಧಿಕರು ಆಶೀರ್ವಾದಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವಿಶೇಷ ವರದಿ.

Leave a Reply

Your email address will not be published. Required fields are marked *