ವಾಯ್ಸ್ ಆಫ್ ಬಂಜಾರ ವಾರ 86 ವಿಶೇಷ ಆಹ್ವಾನಿತರಾಗಿ ರಮೇಶ್ ಲಮಾಣಿ ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 20 ರ ಕಾಂಟೆಸ್ಟ್.

Spread the love

ದಿನಾಂಕ:.20.01.2024 ಶನಿವಾರ ಸಂಜೆ 7.30 ಗಂಟೆಯಿಂದ ಆನ್ಲೈನ್ ಗೂಗಲ್ ಮೀಟ್ನಲ್ಲಿ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿ 86 ನಡೆಯಿತು. 86ನೇ ವಾರದ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿಯ ವಿಶೇಷ ಆಹ್ವಾನಿತರಾಗಿ ರಮೇಶ್ ಲಮಾಣಿ ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 20 ಕಾಂಟೆಸ್ಟ್ ಮತ್ತು ಸರಿಗಮಪ ಸ್ಪರ್ಧಿಗಳು ಭಾಗವಹಿಸಿದ್ದರು. ಎಲ್ಲಾ ಗಾಯಕರ ಗಾಯನ ಆಲಿಸಿ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು. ಶ್ರೀ ನಾಗರಾಜ್ ಮಹಾರಾಜ್, ಶ್ರೀ ಮಂಜು ಮಹಾರಾಜ್ ದಿವ್ಯ ಸಾನಿಧ್ಯ ವಹಿಸಿದ್ದರು. ನಿರ್ಣಾಯಕರಾಗಿ ಬಂಜಾರ ಹಿರಿಯ ಜಾನಪದ ಗಾಯಕರು ಮತ್ತು ಲೇಖಕರು ಆದ ಕಲಾಶ್ರೀ ವಸಂತ ಎಲ್ ಚವ್ಹಾಣ್, ಶ್ರೀನಿವಾಸ್ ನಾಯ್ಕ್ ಸಂಗೀತ ನಿರ್ದೇಶಕರು, ಕವಿರಾಜ್ ಬಂಜಾರ ಹಿರಿಯ ಗಾಯಕರು ಹಾಜರಿದ್ದರು. ವಾಯ್ಸ್ ಆಫ್ ಬಂಜಾರ ಸಂಚಾಲಕರಾದ ಶ್ರೀ ಗೋಪಾಲ ಬಿ. ನಾಯ್ಕ್ ನಿರೂಪಣೆ ಮತ್ತು ನಿರ್ವಹಣೆ ಮಾಡಿದರು. ವಾಯ್ಸ್ ಆಫ್ ಬಂಜಾರದ ಸಂಸ್ಥಾಪಕರು ಮತ್ತು ಸಂಚಾಲಕರು ಆದ ರಾಮು ಎನ್ ರಾಠೋಡ್ ಮಸ್ಕಿ ಮತ್ತು ಪುಷ್ಪ ಬಾಯಿ, ಚಂದ್ರಕಾಂತ ಚವ್ಹಾಣ್ ತೆಲಂಗಾಣ, ಕರಿಯಾ ನಾಯ್ಕ್ ತಹಸೀಲ್ದಾರರು, ಆರ್ ಚಂದ್ರಶೇಖರ ಉಪಸ್ಥಿತರಿದ್ದರು.

ಕುಮಾರ ನಾಯ್ಕ್, ಸಿಂಧು ಚವ್ಹಾಣ್, ಪ್ರೇಮಾ ರಾಠೋಡ್, ನಿಖಿತಾ ಜಾಧವ್, ಪೂಜಾ ಚವ್ಹಾಣ್, ಗೋಪಾಲ ಚವ್ಹಾಣ್, ವಿಜಯಲಕ್ಷ್ಮಿ ಕಡೂರ, ಅನಿತಾ ರಾಠೋಡ್, ಹರೀಶ್ ಸಿ, ಮಾರುತಿ ರಾಠೋಡ್, ನೀಲಪ್ಪ ರಾಠೋಡ್, ಕುಮಾರ್ ನಾಯ್ಕ್, ಸಂದೇಶ ನಾಯ್ಕ್, ಗೋಪಾಲ ಬಾವೊಜಿ, ಸೋಮು ಪಮ್ಮಾರ್, ಪ್ರಕಾಶ್ ಜಾಧವ್, ಕಾವೇರಿ ಚವ್ಹಾಣ್, ಕೋಮಲ ಚವ್ಹಾಣ್, ರಮೇಶ್ ಲಮಾಣಿ, ರವಿ ಲಂಬಾಣಿ, ಚಂದ್ರಕಲಾ ಬಾಯಿ, ಕವಿತಾ ಬಾಯಿ, ದೂಗಾ ನಾಯ್ಕ್, ಧರ್ಮೆಂದ್ರ ಕುಮಾರ ಪಿ ಎಲ್, ಸಿಂಧು ಚವ್ಹಾಣ್, ಇಂದುಮತಿ ಚವ್ಹಾಣ್, ಲಕ್ಷ್ಮೀ ಬಾಯಿ ಮಂಗಳೂರು ಹೀಗೆ ಹಲವಾರು ಬಂಜಾರ ಉದಯೋನ್ಮುಖ ಮತ್ತು ಹಿರಿಯ ಗಾಯಕರು, ಬರಹಗಾರರು ಭಾಗವಹಿಸಿ ಬಂಜಾರ ಜಾನಪದ, ಭಾವಗೀತೆ, ಭಜನೆ ಮತ್ತು ಸಂಸ್ಕೃತಿ ಸಂಪ್ರದಾಯ ಇತಿಹಾಸ ಕುರಿತು ಹಾಡುಗಳನ್ನು ಹಾಡಿದರು ಚರ್ಚಿಸಿದರು ಕಾರ್ಯಕ್ರಮಕ್ಕೆ ಮೆರುಗು ಕೂಡ ತಂದರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *