ತಾವರಗೇರಾ ಪಟ್ಟಣದ ಸಾರ್ವಜನಿಕರಿಂದ ಶ್ರೀರಾಮಲಲ್ಲಾ ಸಂಭ್ರಮ,

Spread the love

ತಾವರಗೇರಾ ಪಟ್ಟಣದ ಸಾರ್ವಜನಿಕರಿಂದ ಶ್ರೀರಾಮಲಲ್ಲಾ ಸಂಭ್ರಮ,

ಇಂದು ದೇಶದ್ಯಾಂತ ನಡೆಯುವ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ಯ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು 14ನೇ ವಾರ್ಡನಲ್ಲಿ ಬರುವ ಶ್ರೀ ನರಹರಿ ಬಡವಾಣೆಯ ಶ್ರೀ ಆಂಜನೇಯ ದೇವಸ್ಥಾನದಿಂದ ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಭೃಹತ್ ಮೆರವಾಣಿಗೆಯ ಮುಖಾಂತರ ಶ್ರೀರಾಮನ ಭಕ್ತರು ಪಾಲ್ಗೊಂಡಿದ್ದರು. ಎಲ್ಲೆಲ್ಲೂ ರಾಮ ನಾಮ ಜಪ, ಸರ್ವ ರಾಮ ಮಯಂ, ಶ್ರೀರಾಮ್ ಭಕ್ತರಲ್ಲಿ ಪುಳಕ, ಎಲ್ಲೆಲ್ಲೂ ಶ್ರೀರಾಮನ ಘೋಷಣೆ. ಆಯೋಧ್ಯಯಲ್ಲಿ ಸ್ವರ್ಗವೇ ಧರೆಗಿಳಿದ ಅನುಭವ.ದೇಶದ ಗಲ್ಲಿ ಗಲ್ಲಿಯಲ್ಲೂ ಶ್ರೀರಾಮನ ಜಪ, ಇಡೀ ಭಾರತದಲ್ಲಿ ಶ್ರೀರಾಮನ ಹಬ್ಬ. ಶತಮಾನಗಳ ಕನಸು ಇಂದು ನನಸು. ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಶುಭ ದಿನ. ಇಂದು ತಾವರಗೇರಾ ಪಟ್ಟಣದ ಸಾರ್ವಜನಿಕರು ಪಾಲ್ಗೊಂಡು ಶ್ರೀರಾಮಲಲ್ಲಾ ಸಂಭ್ರಮ ಅಚರಿಸಿಕೊಂಡರು. ಭಕ್ತಿಯಿಂದ ಭಜನೆಯೊಂದಿಗೆ, ಮೇಳದೊಂದಿಗೆ ಹಗಲುವೇಷದೊಂದಿಗೆ, ಶ್ರೀರಾಮನ ಭಾವ ಚಿತ್ರದೊಂದಿಗೆ ಸಂಭ್ರಮ ಅಚರಿಸಿಕೊಂಡರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *