ಗಾಲಿ ಜನಾರ್ಧನ ರೆಡ್ಡಿ ಗಂಗಾವತಿಯಲ್ಲಿ ಭರ್ಜೇರಿ ಗೆಲುವು, ಕಾರ್ಯಕರ್ತರಿಂದ ವಿಜಯೋತ್ಸವದ ಸಂಭ್ರಮ,

Spread the love

ಗಾಲಿ ಜನಾರ್ಧನ ರೆಡ್ಡಿ ಗಂಗಾವತಿಯಲ್ಲಿ ಭರ್ಜೇರಿ ಗೆಲುವು, ಕಾರ್ಯಕರ್ತರಿಂದ ವಿಜಯೋತ್ಸವದ ಸಂಭ್ರಮ,

ಗಂಗಾವತಿ ಕ್ಷೇತ್ರದ ಮತದಾರರು ಅತ್ಯಮೂಲ್ಯವಾದ ಮತ ನೀಡಿ ಇಂದು ಕೆ.ಆರ್.ಪಿ.ಪಿ. ಅಭ್ಯಾರ್ಥಿಯನ್ನ ಭರ್ಜೇರಿ ಗೆಲುವು ಸಾಧಿಸಿದ್ದಾರೆ.  ಗಂಗಾವತಿಯನ್ನೆ ಆಯ್ಕೆ ಮಾಡಿಕೊಂಡು ಹೊಸ ಕ್ಷೇತ್ರಕ್ಕೆ ಆಗಮಿಸಿ ಭರ್ಜೇರಿ ಗೆಲವು ಸಾಧಿಸಿದ್ದಾರೆ ಅಂದರೆ ಅದು ಅಷ್ಟು ಸುಲಭದ ಮಾತಲ್ಲ,  ಕೆ.ಆರ್.ಪಿ.ಪಿ ಪಕ್ಷದ ವ್ಯವಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿಯಾಗಿ ವಿಜಯ ಸಾಧಿಸಿದ್ದಕ್ಕೆ ಗಂಗಾವತಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಕೆ.ಆರ್.ಪಿ.ಪಿ ಪಕ್ಷದ ಮುಖಂಡರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬೆಳಿಗ್ಗೆಯಿಂದಲೇ ಟಿವಿಗಳ ಮುಂದೆ ಮತ್ತು ಅಲ್ಲಲ್ಲಿ ಮೊಬೈಲ್ ಗಳ ಹಿಡಿದುಕೊಂಡು, ಉಸಿರು ಬಿಗಿ ಹಿಡಿದು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಜಾತಕ ಪಕ್ಷಿಗಳಂತೆ ಆಯಾ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಕ್ಷಣ ಗಣನೆಯನ್ನು ಕಾಯುತ್ತಿದ್ದರು ಮಧ್ಯಾನದ 12 ಗಂಟೆ ಸುಮಾರಿಗೆ ಕೆ.ಆರ್.ಪಿ.ಪಿ ಅಭ್ಯರ್ಥಿಯಾದ ಗಾಲಿ ಜನಾರ್ಧನ ರೆಡ್ಡಿ ಅವರ 8.000 ಮತಗಳ ಅಂತರದಿಂದ ಮುನ್ನಡೆ ಇದ್ದಾಗಲೇ ಕೆ.ಆರ್.ಪಿ.ಪಿ ಪಕ್ಷದ ಕಾರ್ಯಕರ್ತರು ಕೊನೆಯ ಸುತ್ತಿನಲ್ಲಿ ವಿಜಯೋತ್ಸವವನ್ನು ಆಚರಿಸಿ, ನಂತರ ಗೆಲುವು ಖಚಿತವಾಗುತ್ತಿದ್ದಂತೆ ಪರಸ್ಪರರು ಸಿಹಿ ವಿತರಣೆ ಮಾಡಿಕೊಂಡರು, ಕೆ.ಆರ್.ಪಿ.ಪಿ ಪಕ್ಷದ ವ್ಯವಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಪಕ್ಷದ ಮುಖಂಡರು, ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಕಾರುಗಳಲ್ಲಿ ಮತ್ತು ಬೈಕುಗಳಲ್ಲಿ ಕೊಪ್ಪಳದಿಂದ ಹಿಡಿದು ಗಂಗಾವತಿಯವರೆಗೂ ಧ್ವಜವನ್ನು ಹಿಡಿದು ವಿವಿಧ ಬೀದಿಗಳಲ್ಲಿ ಸಂಚರಿಸಿ ಸಡಗರ ಸಂಭ್ರಮದಿಂದ ಆಚರಿಸಿ. ಇದೇ ವೇಳೆ ಕೆ.ಆರ್.ಪಿ.ಪಿ ಪಕ್ಷದ ವ್ಯವಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಮತ್ತು ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ವಿಜಯೋತ್ಸವದಲ್ಲಿ ಪಾಲ್ಗೊಂಡು ಸಂತಸವನ್ನು ಹಂಚಿಕೊಂಡರು. ಒಟ್ಟಿನಲ್ಲಿ ಗಂಗಾವತಿ ಮತ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸಲಿ ಎನ್ನುವುದೇ ನಮ್ಮ ತಾವರಗೇರಾ ನ್ಯೂಸ್ ಪತ್ರಿಕಾ ಬಳಗದ ಆಶಯ.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *