“ಸರ್ವರ ಸಹ ಮತವೇ ಶ್ರೀರಕ್ಷೆ” ಡಾ” ಎನ್.ಟಿ.ಶ್ರೀನಿವಾಸ್- ವಿಜಯನಗರ  ಜಿಲ್ಲೆ ಕೂಡ್ಲಿಗಿ.

Spread the love

ಸರ್ವರ ಸಹ ಮತವೇ ಶ್ರೀರಕ್ಷೆಡಾಎನ್.ಟಿ.ಶ್ರೀನಿವಾಸ್ವಿಜಯನಗರ  ಜಿಲ್ಲೆ ಕೂಡ್ಲಿಗಿ.

ತಾಲೂಕಿನ ಸರ್ವರ ಸಹಮತವೇ ನನಗೆ ಶ್ರೀರಕ್ಷೆಯಾಗಿದೆ, ಎಂದು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ವೈದ್ಯ ಎನ್.ಟಿ.ಶ್ರೀನಿವಾಸ ನುಡಿದರು. ಅವರು ಮೇ9ರಂದು ಪತ್ರಕರ್ತರೊಂದಿಗೆ ಮಾತನಾಡಿದರು, ತಾಲೂಕಿನ ಸರ್ವಜನರ ಸಹಮತ ವು, ಸರ್ವ ಜನಾಂಗದ ಶಾಂತಿಯ ತೋಟವಾದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ನನ್ನ ಕಡೆಯಿದೆ. ನಾನು ಕೇವಲ ಅಧಿಕಾರಕ್ಕಾಗಿ ಸ್ಪರ್ಧೆಗಿಳಿದಿಲ್ಲ ತಾಲೂಕಿನ ಸೇವಾ ಕಾಂಕ್ಷಿಯಾಗಿರುವೆ, ಇದು ಕ್ಷೇತ್ರದ ಸರ್ವ ಜನಾಂಗಗಳ ಮಹಾನೀಯರಿಗೆ  ಹಾಗೂ ಸರ್ವ ಮತದಾರ ಭಾಂದವರಿಗೆ ಮನವರಿಕೆಯಾಗಿದೆ. ಮತ ದಾನ ಮಾಡುವ ಸಂದರ್ಭದಲ್ಲಿ ಆವರು, ನನಗೆ ತಮ್ಮ ಅಮೂಲ್ಯ ಮತ ದಾನ ಮಾಡುವ ಮೂಲಕ ನನಗೆ ಆಶೀರ್ವಾದ ಮಾಡಲಿದ್ದಾರೆ. ಮೇ10ರಂದು ಜರುಗುವ ಚುನಾವಣೆಯಲ್ಲಿ, ನನ್ನ ಗುರುತಾದ ಕಾಂಗ್ರೇಸ್ ಪಕ್ಷದ ಚಿಹ್ನೆಯಾದ ಕೈ ಗೆ ಮತದಾರರು ಮತ ಚಲಾಯಿಸಲಿದ್ದಾರೆ. ಮತ್ತು ಮತಗಳನ್ನು ಹಾಕಿಸಿ ನನ್ನ ಕೈ ಹಿಡಿದೆತ್ತಿ ಗೆಲ್ಲಿಸಲಿದ್ದಾರೆ, ಎಂಬ ನಂಬುಗೆ ತಮ್ಮಲ್ಲಿರುವುದಾಗಿ ಅವರು ತಿಳಿಸಿದರು. ಈ ಹಿನ್ನಲೆಯಲ್ಲಿ  ಕ್ಷೇತ್ರದ ಸರ್ವ ಮತ ದಾರ ಭಾಂದವರ ಆಶೀರ್ವಾದದಿಂದಾಗಿ, ತಾವು ಬಹುಮತದಿಂದ ಚುನಾವಣೆಯಲ್ಲಿ ಗೆಲ್ಲುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ವರದಿ- ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *