ತಾವರಗೇರಾ ಪಟ್ಟಣ ತುಂಬೆಲ್ಲಾ ಪೊಲೀಸ್ ಪಡೆಯ ಸರ್ಪಗಾವಲು.

Spread the love

ತಾವರಗೇರಾ ಪಟ್ಟಣ ತುಂಬೆಲ್ಲಾ ಪೊಲೀಸ್ ಪಡೆಯ ಸರ್ಪಗಾವಲು.

ಕರ್ನಾಟಕ ರಾಜ್ಯಾದಂತ ಸರ್ಕಾರ ಹೋರಡಿಸಿರುವ ಲಾಕಡೌನ್ ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಇಂದು ಬೆಳಗಿನ ಜಾವೆಯಿಂದ ತಲ್ಲಣ ವಾಗಿರುವ ದೃಷ್ಯ ಕಂಡು ಬಂತು. ಇಲ್ಲಿಯ ತನಕ ತಾವರಗೇರಾ ಪಟ್ಟಣದಲ್ಲಿ ಬೆಳಿಗ್ಗೆ 6 ರಿಂದ 10 ಘಂಟೆ ಯವರೆಗೆ  ದಿನಸಿ ಖರೀದಿ ಮಾಡಲು ಹಳ್ಳಿ ಹಳ್ಳಿಗಳಿಂದ ಸಾರ್ವಜನಿಕರು ಬಂದು ಲಾಕಡೌನ್ ಸಮಯ ಪ್ರಜ್ಞೆ ಇಟ್ಟುಕೊಂಡು ದಿನಸಿ ವಸ್ತುಗಳನ್ನು ಖರೀದಿ ಮಾಡಿ ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಹಳ್ಳಿಗಳತ್ತ ಮುಖ ಮಾಡಿದರು. ಆದರೂ ಕೆಲವು ಸಾರ್ವಜನಿಕರಿಗೆ ರಸ್ತೆಗೆ ಇಳಿದ ಸಾರ್ವಜನಿಕರಿಗೆ ಪೋಲೀಸರು ಕಾನೂನಿನ ಮನವರಿಕೆ ಪ್ರಜ್ಞೆ ಮಾಡಿ.

ಸರ್ಕಾರ ನಿಡಿರುವ ಈ ಲಾಕಡೌನ್ ನಮಗಾಗಿ ಅಲ್ಲಾ ನಮ್ಮೆಲ್ಲರ ಓಳಿತುಗಾಗಿ ಹಾಗಾಗಿ ಈ ಫಾಲನೆ ಪ್ರತಿಯೊಬ್ಬರು ಫಾಲಿಸಬೇಕು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದರು. ಆದರೇ ಇಂದು ಬೆಳಂ ಬೆಳಗ್ಗೆ  ತಾವರಗೇರಾ ಪಟ್ಟಣದ ಠಾಣೆಯ ಪಿ.ಎಸ್.ಐ. ಗೀತಾಂಜಲಿ ಶಿಂಧೆಯವರು ತಾವರಗೇರಾ ಪಟ್ಟಣದ ಮುಖ್ಯ ರಸ್ತೆಯಾದ ಶ್ರೀ ಬಸವೇಶ್ವರ ಸರ್ಕಲ್ ನಲ್ಲಿ ಬಂದು ತಮ್ಮ ಪೊಲೀಸ್ ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ಧಳದ ಜೊತೆಗೆ ಬಂದು ಸಾರ್ವಜನಿಕರೆ ಮನೆ ಬಿಟ್ಟು ಆಚೆ/ಇಚೆ ಬರಬೇಡಿ ಅಂತಾ ತಿಳಿ ಹೇಳಿ ಕಳುಹಿಸಿ ಕೊಟ್ಟರು,  ನಮಗೋಸ್ಕರ ನಮ್ಮ ಜಿವಕ್ಕೊಸ್ಕರ  ಸರ್ಕಾರ ಲಾಕಡೌನ್ ಮಾಡಿದ್ದರು  ಕೆಲವು ಜನರು ಬೈಕ್ ತೆಗೆದುಕೊಂಡು ತಿರುಗಾಡುವದನ್ನು ಕಂಡು ಪೋಲೀಸರು ಬೈಕ್ಗಗಳಿಗೆ ದಂಡ ಹಾಕಿ, ಇನ್ನೂ ಕೆಲವರಿಗೆ ಮನವರಿಕೆ ಮಾಡಿ, ಮತ್ತೆ ಏನಾದರೂ ರಸ್ತೆಗೆ ಬೈಕ್ ಇಳಿದರೆ ಸಿಜ್ ಮಾಡಲಾಗುವುದು ಎಂದು ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರು. ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆ ಹಾಗೂ ಗ್ರಹ ರಕ್ಷಕ ಧಳದವರು ಕಟ್ಟು ನಿಟ್ಟಿನ ಕ್ರಮದಿಂದ ಇಂದು ತಾವರಗೇರಾ ಪಟ್ಟಣ ಮೋದಲನೆ ದಿನವೇ  ತಲ್ಲಣ ವಾತಾವರಣದಲ್ಲಿದಿದ್ದು ಕಂಡು ಬಂತು. ವಿಶೇಷವಾಗಿ ತಾವರಗೇರಾ ಪಟ್ಟಣದ ಬುದ್ದಿ ಜೀವಿಗಳು, ತಮ್ಮ ತಮ್ಮ ಕುಟುಂಬವಲ್ಲದೆ, ತಾವು ಇರುವ ಗಲ್ಲಿ ಗಲ್ಲಿಯಲ್ಲೂ ಈ ಕರೋನದ ವಿರುದ್ದ ನಾವುಗಳೆ ಹೋರಾಟ ಮಾಡಬೇಕು. ಈಗಾಗಲೆ ಈ ಕರೋನದ ಮೋದಲನೇಯ ಅಲೇಗೆ ಜನ ತತ್ತರವಾಗಿದೆ, ಪುನಃಹ ಎರಡನೇಯ ಅಲೇಯ ಅಬ್ಬರ ಹೇಳಬಾರದ ಸ್ಥೀತಿಯಲ್ಲಿ ಕಾಣುತ್ತಿದ್ದೆವೆ. ಆದಾಗ್ಯೂ ಮೂರನೇ ಅಲೇಯು ಮಕ್ಕಳ ಮೇಲೆ ದುಷ್ಫರಿಣಾಮ ಬೀರುತ್ತದೆ, ಹಾಗಾಗಿ ಮಕ್ಕಳನ್ನ ಜಾಗೃತಿಯಿಂದ ನೋಡಿಕೊಳ್ಳಬೇಕು, ಆಗಾಗ ನಮ್ಮೈ ಕೈಗಳನ್ನು ಸಾಬೂನುನಿಂದ ತೊಳೆದುಕೊಳ್ಳಬೇಕು, ಒಟ್ಟಿನಲ್ಲಿ ಜಾಗೃತಿಯೆ ನಮ್ಮ ಅಸ್ತ್ರ, ಜಾಗೃತಿ ಇಲ್ಲದಿದ್ದರೆ ನಾವುಗಳು ಈ ಕರೋನದ ರೋಗಕ್ಕೆ ತುತ್ತಾಗುತ್ತೇವೆ ಎಂಬ ಜಾಗೃತಿಯ ಮಾತುಗಳು ಗಲ್ಲಿ ಗಲ್ಲಿಯಲ್ಲಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳು ಬಸ್ ನಿಲ್ದಾಣ, ಡಾ..ಅಂಬೇಡ್ಕರ್ ನಗರ, ಶ್ರೀ ಬಸವೇಶ್ವರ ನಗರ, ಶ್ರೀ ಶ್ಯಾಮೀದಲಿ ಸರ್ಕಲ್, ಹಾಗೂ ಗಾಂಧಿ ಚೌಕ್, ಐ.ಬಿ. ಸರ್ಕಲ್ ಈ ಮೊದಲಾದ ಜನಜಂಗುಳ್ಳಿಯ ನಗರ ಹಾಗೂ ಸರ್ಕಲ್ ನಲ್ಲಿ ರಣ ರಣ (ಬೀಕೊ) ಎನ್ನುವ ದೃಶ್ಯ ಕಂಡು ಬಂತ್ತು, ಹೆಮ್ಮೇಯಿಂದ ಹೇಳಬೇಕು ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ಧಳದ ಕಾರ್ಯ ಶ್ಲಾಘನೀಯವಾದದ್ದು, ತಮ್ಮ ಜೀವನ ಹಂಗ್ಗು ತೋರೆದು ಸಾರ್ವಜನೀಕರ ಹೀತಕ್ಕಾಗಿ ಸೇವೆ ಸಲ್ಲಿಸುವವರಿಗೆ ಎಷ್ಟು ಕೃತಜ್ಞಾತೆ ಸಲ್ಲಿಸಿದರು ಸಾಲದು, ತಾವರಗೇರಾ ಪಟ್ಟಣದಲ್ಲಿ ಇತರೆ ಇಲಾಖೆಗಳು ಅಂದರೆ ಪಟ್ಟಣ ಪಂಚಯತ್, ನಾಡ ಕಾರ್ಯಲಯ, ಆರೋಗ್ಯ ಇಲಾಖೆ, ಇದ್ದರು ಸಹ ಇತ್ತ ಗಮನ ಹರಿಸದೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಈ ಪೊಲೀಸ್ ಇಲಾಖೆ ಜೊತೆಗೆ ಕೊನೇ ಪಕ್ಷ ಸ್ವಲ್ಪ ಸಮಯ ಬಿಡು ಮಾಡಿಕೊಂಡು ಈ ಇಲಾಖೆಯ ಜೊತೆಗೆ ಕೈ ಜೋಡಿಸಿದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬುವುದು ಸಾರ್ವಜನೀಕರ ಮೂಖ ಪ್ರಶ್ನೆಯಾಗಿದೆ.

ವರದಿ – ಅಮಾಜಪ್ಪ ಹಚ್. ಜುಮಲಾಪೂರ.

 

Leave a Reply

Your email address will not be published. Required fields are marked *