ದಲಿತ ಹಕ್ಕುಗಳ ಸಮಿತಿ ಮನೆ, ಮನೆಗಳ ಮುಂದೆ ಪ್ರತಿಭಟನೆಯನ್ನು ಮಾಡಲಾಯಿತು.

Spread the love

ದಲಿತ ಹಕ್ಕುಗಳ ಸಮಿತಿ ಮನೆ, ಮನೆಗಳ ಮುಂದೆ ಪ್ರತಿಭಟನೆಯನ್ನು ಮಾಡಲಾಯಿತು.

ರಾಯಚೂರು ನಗರದ ಹರಿಜನವಾಡದಲ್ಲಿ ಮನೆ ಮನೆಗಳ ಮುಂದೆ ಪ್ರತಿಭಟನೆ ನಡೆಸಿ ನಂತರ ರಾಯಚೂರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಕೊಡಲಾಯಿತು. ಕೋವಿಡ್19 ನಿಂದ ಇಡೀ ರಾಜ್ಯದಲ್ಲಿ ದುಡಿಯುವ ಜನರಿಗೆ ದಲಿತರಿಗೆ ಪರಿಹಾರ ಒದಗಿಸ ಬೇಕು ಮತ್ತು ಎಲ್ಲಾರಿಗೆ ಉಚಿತವಾಗಿ ಲಸಿಕೆಯನ್ನು ಮನೆ ಮನೆಗೆ ತೆರಳಿ ಹಾಕಬೇಕು ಮತ್ತು 10 ಸಾವಿರ ನಗದು ಹಣ ಜೋತೆಗೆ ಅಗತ್ಯ ವಸ್ತುಗಳನ್ನು ಸೇರಿದಂತೆ ಇತರ  ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

  • ತಿಂಗಳಿಗೆ 10.000. ರೂ/ಗಳು ಹಾಗೂ 10 ಕೆ.ಜಿ. ಹಕ್ಕಿ, ಜೊತೆಗೆ 14 ಅಗತ್ಯ ವಸ್ತುಗಳು ಉಚಿತವಾಗಿ ನೀಡಬೇಕು.
  • ಜೀವ ಉಳಿಸಿ ಪರಿಹಾರ ಒದಗಿಸಿ ಡಿ.ಹೆಚ್.ಎಸ್.ಅಭಿಯಾನ.
  • ರೇಮ್ ಡಿಸಿವರ್ ಔಷದಿ ಮತ್ತು ಅತ್ಯಗತ್ಯವಿರುವ ಮಾತ್ರೆಗಳನ್ನು ರೋಗಿಗಳಿಗೆ ಸರಿಯಾದ ಸಮಯಕ್ಕೆ ನೀಡಬೇಕು. ಹಿಗೇ ಹತ್ತು ಹಲವು ಬೇಡಿಕೆ ಇಟ್ಟುಕೊಂಡ ಮಾನ್ಯ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
  • ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಂಚಾಲಕರಾದ, ಕೆ.ಜಿ. ವೀರೇಶ್, ಹೆಚ್ ಪದ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ – ರಮೇಶ ವೀರಾಪೂರ ಸಮಾಜ ಸೇವಕರು

Leave a Reply

Your email address will not be published. Required fields are marked *