ಕುಷ್ಟಗಿಯ ಮಾಜಿ ತಹಶೀಲ್ದಾರ್ ಶ್ರೀ ವೇದವ್ಯಾಸ್ ಮುತ್ತಾಲಿಕ್ ಇನ್ನಿಲ್ಲ.

Spread the love

ಕುಷ್ಟಗಿಯ ಮಾಜಿ ತಹಶೀಲ್ದಾರ್ ಶ್ರೀ ವೇದವ್ಯಾಸ್ ಮುತ್ತಾಲಿಕ್ ಇನ್ನಿಲ್ಲ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಾಜಿ ತಹಶೀಲ್ದಾರರಾದ ಶ್ರೀ ವೇದವ್ಯಾಸ ಮುತ್ತಾಲಿಕರವರು ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ಕುಂಟಿತವಾದ ಆದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು ಆದರು ಕರೋನದ ವಿಧೀಯಾಟಕ್ಕೆ ಆಟ ಮುಗಿಸಿದ ಶ್ರೀ ವೇದವ್ಯಾಸ್ ಮುತ್ತಾಲಿಕ್ ರವರು. ಇವರ ಸೇವೆ ಅಮೋಘವಾದದ್ದು. ಶ್ರೀ ವೇದವ್ಯಾಸ್ ಮುತ್ತಾಲಿಕರವರು ತಾವರಗೇರಾ ಪಟ್ಟಣದ ನಾಡ ಕಾರ್ಯಲಯದಲ್ಲಿ ಉಪ-ತಹಶೀಲ್ದಾರರಾಗಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದು, ಹನಮನಾಳದಲ್ಲಿ ಉಪ-ತಹಶೀಲ್ದಾರರಾಗಿ, ಅಲ್ಲದೇ ಕೊಪ್ಪಳದ ತರಬೇತಿ ಸಂಸ್ಥೆಯಲ್ಲಿ ಉಪ-ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ತದ ನಂತರ ಕುಷ್ಟಗಿ ತಹಶೀಲ್ ಕಾರ್ಯಲಯದಲ್ಲಿ ಪ್ರಥಮ ದರ್ಜೆ ಸಹಾಯಕವಾಗಿ ಕಾರ್ಯ ನಿರ್ವಹಿಸಿದ್ದು, ತದನಂತರ ಇದೇ ತಹಶೀಲ್ ಕಾರ್ಯಲಯದಲ್ಲಿ ಗ್ರೇಡ್ 2 ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದು, ಇವರ ಸೇವೆಯನ್ನು ಗುರುತಿಸಿ ಸರ್ಕಾರ ಇವರನ್ನು ಕುಷ್ಟಗಿ ಅದೇ ತಹಶೀಲ್ದಾರ ಕಾರ್ಯಲಯದ ಗ್ರೇಡ್ 1 ತಹಶೀಲ್ದಾರನ್ನಾಗಿ ಸೇವೆ ಮಾಡಿದ ಕಿರ್ತಿ ಇವರದ್ದು, ಸದ್ಯ ಇವರು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ತಹಶೀಲ್ದಾರಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಕೆಲವು ದಿನಗಳಿಂದ ಇವರಲ್ಲಿ ಆರೋಗ್ಯದ ಸ್ಥೀತಿ ಗಂಭೀರವಿದ್ದು, ಇವರ ಆರೊಗ್ಯದಲ್ಲಿ ಏರುಪೇರು ಆಗಿ ವಿಧಿಯಾಟಕ್ಕೆ ಇಂದು ಕೊಪ್ಪಳ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೋನೆ ಉಸಿರು ಬಿಟ್ಟರು. ಮಾನ್ಯ ಜಿಲ್ಲಾಧಿಕಾರಿ ಸುರಳ್ಕರ ವೀಕಾಶ ಕೀಶೋರ ಸೇರಿದಂತೆ ತಹಶೀಲ್ದಾರ ಎಂ.ಸಿದ್ದೇಶ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರೆಯಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಪ್ರೋರ್ಟಲ್ ಬಳಗದವತಿಯಿಂದ ಆ ಭಗವಂತನಲ್ಲಿ ಪ್ರಾಥಿಸುತ್ತೇವೆ.

  ವರದಿ – ಸಂಪಾದಕೀಯ

 

Leave a Reply

Your email address will not be published. Required fields are marked *