ಹುರುಳಿಹಾಳು:ಮಾ26ರಂದು ಬೃಹತ್ ಉಚಿತ ಆರೋಗ್ಯ ಶಿಬಿರ.

Spread the love

ಹುರುಳಿಹಾಳು:ಮಾ26ರಂದು ಬೃಹತ್ ಉಚಿತ ಆರೋಗ್ಯ ಶಿಬಿರ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಹುರುಳಿಹಾಳು ಗ್ರಾಮದಲ್ಲಿ ಮಾ26ರಂದು. ಸಮಾಜ ಸೇವಕ ಹಾಗೂ ನೇತ್ರತಜ್ಞ ಡಾ,ಎನ್.ಟಿ.ಶ್ರೀನಿವಾಸ, ಅಭಿಮಾನಿ ಬಳಗದ ವತಿಯಿಂದ. ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಗುಂಡುಮುಣುಗು ಹಾಗೂ ಹೂಡೇಂ ಜಿಪಂ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು. ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದು, ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿಗಳ ಬಳಗದವರು ಈ ಮೂಲಕ ಕೋರಿದ್ದಾರೆ. ದಿವಂಗತ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣನವರು,ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ದಿವಂಗತ ಎಮ್.ವೀರಭದ್ರಪ್ಪ ರವರ ಸ್ಮರಣಾರ್ಥ ಶಿಬಿರ ಆಯೋಜಿಸಲಾಗಿದೆ ಎಂದು. ಡಾ,ಎನ್.ಟಿ.ಶ್ರೀನಿವಾಸ್ ರವರ ಅಭಿಮಾನಿಗಳು ತಿಳಿಸಿದ್ದಾರೆ, ಹುರುಳಿಹಾಳು ಗ್ರಾಮದಲ್ಲಿ ಶಿಬಿರದ ಪ್ರಚಾರ ಕಾರ್ಯದಲ್ಲಿ. ತಮ್ಮನ್ನು ತೊಡಗಿಸಿಕೊಂಡಿರುವ ಹುಲಿಕುಂಟಿ ಓಬಣ್ಣ ನವರು, ಶಿಬಿರದ ಪ್ರಚಾರದ ಕರಪತ್ರ ಹಂಚುತ್ತ ಪ್ರಚಾರದ ವಾಹನದೊಂದಿಗೆ ಕಾಣಿಸಿಕೊಂಡರು. ಅವರು ಮಾತನಾಡಿ, ಗುಂಡುಮುಣಗು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ, ಡಾ,ಎನ್.ಟಿ.ಶ್ರೀನಿವಾಸ್ ರವರ ಅಭಿಮಾನಿ ಬಳಗದವರು. ಈಗಾಗಲೇ ಖುದ್ದು ಭೇಟಿ ನೀಡಿ ಧ್ವನಿವರ್ಧಕದ ಮೂಲಕ ಮತ್ತು ಕರಪತ್ರ ಹಂಚುವುದರ ಮೂಲಕ, ಶಿಬಿರದ ಕುರಿತು ಪ್ರಚಾರ ಮಾಡಿರುವುದಾಗಿ ಅವರು ತಿಳಿಸಿದರು.

ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *