ಬಾಲಕರ ವಸತಿ ನಿಲಯದಲ್ಲಿ  ಸರಸ್ವತಿ ಪೂಜೆಯೊಂದಿಗೆ  ಮಕ್ಕಳ ಬಿಳ್ಕೊಡುಗೆ ಸಮಾರಂಭ…

Spread the love

ಬಾಲಕರ ವಸತಿ ನಿಲಯದಲ್ಲಿ  ಸರಸ್ವತಿ ಪೂಜೆಯೊಂದಿಗೆ  ಮಕ್ಕಳ ಬಿಳ್ಕೊಡುಗೆ ಸಮಾರಂಭ

ಮುದೇನೂರಿನ  ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ  ಸರಸ್ವತಿ ಪೂಜೆ ಹಾಗೂ ಮಕ್ಕಳ ಬಿಳ್ಕೊಡುಗೆ  ಸಮಾರಂಭ ನಡೆಯಿತು. ಬೀಳ್ಕೊಡುವ ಸಮಾರಂಭದ ಜೊತೆಗೆ ವಿದ್ಯಾನ ನೀಡುವ ವಿದ್ಯಾ ಮಾತೆ ಸರಸ್ವತಿಯ ಪೂಜೆಯನ್ನ ಭಕ್ತಿ ಪೂರ್ವಕವಾಗಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬ ಉದ್ದೇಶದಿಂದ ಪೂಜೆ ಮಾಡಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ನೆರವೇರಿಸಿದರು. ಈ ಸಮಾರಂಭದಲ್ಲಿ  ಮೇಲ್ವಿಚಾರಕರಾದ ಶ್ರೀಮತಿ ಸುಜಾತ ಅವರು ಮಾತನಾಡುತ್ತಾ  ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ  ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಈ  ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಸ್ತಗಿರಿ ಸಾಬ್  ಬಡಿಗೇರ್ ,ಚಂದ್ರಶೇಖರ ಕುಂಬಾರ ಮಾಂತೇಶ್ ಹಾವಿನಾಳ, ಸುಜಾತ ಕುರಟ್ಟಿ, ನಾಗರಾಜ ಗಿಣಿಗೇರ, ಸೋಮನಾಥ, ಶ್ರೀಮತಿ ನಪಿಸಬೇಗಮ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ವರದಿ- ಚಂದ್ರುಶೇಖರ ಕುಂಬಾರ ಮುದೇನೂರು

Leave a Reply

Your email address will not be published. Required fields are marked *