ತುಮಕೂರು ಗ್ರಾಮಾಂತರ ಕ್ಷೇತ್ರ ಹೆಬ್ಬೂರು ಹೋಬಳಿ ಮಟ್ಟದಲ್ಲಿ ಸಂಜೆ ಪೊರಕೆಯೇ ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Spread the love

ತುಮಕೂರು ಗ್ರಾಮಾಂತರ ಕ್ಷೇತ್ರ ಹೆಬ್ಬೂರು ಹೋಬಳಿ ಮಟ್ಟದಲ್ಲಿ ಸಂಜೆ ಪೊರಕೆಯೇ ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಲಿಷ್ಠ ಭಾರತಕ್ಕಾಗಿ ಗಾಂಧಿ ಕಂಡ ಸ್ವರಾಜ್ಯಕ್ಕಾಗಿ ಇಂದು ನಾವೆಲ್ಲರೂ ಸೇರು ಭ್ರಷ್ಠ ರಾಜಕಾರಣವನ್ನ ಕಿತ್ತೆಸಿಯೋಣ, ಜನಸಾಮಾನ್ಯರು ಒಂದಾಗಿ ಮುಂದಿನ ಭವಿಷ್ಯಕ್ಕಾಗಿ ಭಾರತದಲ್ಲಿ ಪೊರಕೆಯೇ ಪರಿಹಾರವಾಗಿದೆ, ಆದ್ದರಿಂದ ಪ್ರತಿಯೊಬ್ಬರು ನಮ್ಮ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸಿ ಎಂದು ಮನೆ ಮನೆಗ ತೆರಳುವ ಕಾರ್ಯಕ್ರಮವನ್ನು ದಿನೇಶ್ ಕುಮಾರ ವಹಿಸಿಕೊಂಡರು. ಇಂತಹ ಕಾರ್ಯಕ್ರಮ ಪ್ರತಿ ಹಳ್ಳಿಯಲ್ಲಿ ನಡೆಸಲಾಯಿತು. ವಕೀಲರಾದ ಬಿ. ದಿನೇಶ್ ಕುಮಾರ್ ಆಮ್ ಆದ್ಮಿ ಪಾರ್ಟಿ ತುಮಕೂರು ಗ್ರಾಮಾಂತರ ಅಭ್ಯರ್ಥಿ ಆಕಾಂಕ್ಷಿ ಹಾಗೂ ಗುರುಮೂರ್ತಿ, ಭೀಮರಾಜು, ನೂರುಲ್ಲ, ರಾಜೇಶ್ವರಿ, ರುದ್ರೇಶ್, ಅಂಚಿಪುರ ವೆಂಕಟಾಚಲಯ್ಯ, ಬಿದನಗೆರೆ ನಾರಾಯಣ, ಬೈಚೆನಳ್ಳಿ ಕುಮಾರ್ ಇತರರು ಭಾಗವಹಿಸಿದ್ದರು. ಈ ಮೂಲಕ ಜನರನ್ನು ಜಾಗೃತಿ ಮೂಡಿಸುವ ಕೆಲಸ ಮಾಡಿ ಪ್ರಚಾರ ಕಾರ್ಯ ಆರಂಭಿಸಲಾಯಿತು ಎಂದು ತಿಳಿಸಿದರು. ದಿನೇಶ್ ಕುಮಾರ್ ಮಾತನಾಡಿ ತುಮಕೂರು ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಶಿಕ್ಷಣ ಅರೋಗ್ಯ ಸರ್ಕಾರಿ ಸವಲತ್ತುಗಳ ಮಾಹಿತಿ ನೀಡಿ ಅವುಗಳನ್ನು ತಲುಪಿಸುವಲ್ಲಿ ಶ್ರಮ ವಹಿಸುತ್ತೇವೆ ಹಾಗೂ ಕ್ಷೇತ್ರದಲ್ಲಿ ಜನರಿಗೆ ನಿವೇಶನಗಳ ಕೊರತೆ ಇದ್ದು ಎಲ್ಲಾ ಜನಾಂಗದವರಿಗೆ ನಿವೇಶನ ಮನೆಯನ್ನು ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು ಎಂದು ಮಾತು ನೀಡಿದ್ದಾರೆ.

ವರದಿ –ಸಂಪಾದಕೀಯಾ

Leave a Reply

Your email address will not be published. Required fields are marked *