ನಾಣ್ಯಾಪುರ:ನಿಧಿಗಾಗಿ ಶ್ರೀಸಂಗನ ಬಸವನ ಗದ್ದಿಗೆ ಬಗೆದ ಕದೀಮರು.

Spread the love

ನಾಣ್ಯಾಪುರ:ನಿಧಿಗಾಗಿ ಶ್ರೀಸಂಗನ ಬಸವನ ಗದ್ದಿಗೆ ಬಗೆದ ಕದೀಮರು.

ವಿಜಯನಗರ  ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು, ದಶಮಾಪುರ ಗ್ರಾಮ ಪಂಚಾಯ್ತಿ ವ್ತಾಪ್ತಿಯ ನಾಣ್ಯಾಪುರ ಗ್ರಾಮ. ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿರುವ, ಶ್ರೀ ಸಂಗನ ಬಸವೇಶ್ವರ ಪಾಳು ಬಿದ್ದ ಮಠದ ಆವರಣದಲ್ಲಿದ್ದ. ಶ್ರೀಸಂಗನ ಬಸವಣ್ಣನ ಬೃಹತ್ ಮೂರ್ತಿಯನ್ನು ನಿಧಿಗಳ್ಳರು ಹಾನಿಗೊಳಿಸಿದ್ದಾರೆ. ಮತ್ತು ಕಲ್ಲಿನ ಗದ್ದಿಗೆಯಂತಿದ್ದ ಕಟ್ಟೆಯನ್ನ ನಿಧಿಗಾಗಿ ಅಗೆದಿದ್ದಾರೆ. ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದ್ದು, ನಿಧಿಗಳ್ಳರು ಬುಧವಾರ ರಾತ್ರಿಯೇ ಕನ್ನ ಹಾಕಿ ಅಗೆದಿದ್ದಾರೆಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಕೂಡ್ಲಿಗಿ  ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕುಗಳ ಸುತ್ತ ಮುತ್ತ , ಗ್ರಾಮೀಣ ಭಾಗದ ನಿರ್ಜನ ಪ್ರದೇಶದಲ್ಲಿರುವ ಪಾಳು ಬಿದ್ದ ದೇವಸ್ಥಾನಗಳಿಗೆ ನಿಧಿಗಳ ಹಾವಳಿ ಮಿತಿ ಮೀರಿದೆ ಎಂದು ಹಲವು ಗ್ರಾಮಸ್ಥರು ಬೇಸರ ವ್ಯೆಕ್ತಪಡಿಸಿದ್ದಾರೆ. ಸಂಗನ ಮಠ ಬಹು ಪುರಾತನ ಕಾಲದ, ಪಾಳು ಬಿದ್ದ ಪುರಾತನ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡಿದ್ದಾರೆಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಬೈಕ್ ಕಳ್ಳತನ, ರಾಸುಗಳ ಕಳ್ಳತನ, ಇತ್ಯಾದಿ ಕಳ್ಳತನ ಪ್ರಕರಣಗಳು, ಇತ್ತೀಚೆಗೆ ಕೂಡ್ಲಿಗಿ ಹಾಗು ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಲವೆಡೆಗಳಲ್ಲಿ. ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವ ಪೊಲೀಸರು, ನಿಧಿಗಳ್ಳರನ್ನ ಶೀಘ್ರವೆ ಪತ್ತೆ ಹಚ್ಚಿ ಪ್ರಕರಣಗಳನ್ನ ಭೇದಿಸಬೇಕಿದೆ.  ಅಂದಾಗ ಮಾತ್ರ ಸಾರ್ವಜನಿಕ ವಲಯದಲ್ಲಿ, ಪೊಲೀಸರ ಬಗ್ಗೆ ಅತೀವ ಗೌರವ ಮೂಡಲು ಸಾಧ್ಯ ಎಂದು ನಾಗರೀಕರು ಹಾಗೂ ಗ್ರಾಮಸ್ಥರು ಅಭಿಪ್ರ‍ಾಯ ವ್ಯೆಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ನಾಣ್ಯಪುರ ಗ್ರ‍ಾಮಸ್ಥರು ಸೇರಿದಂತೆ, ನೆರೆ ಹೊರೆಯ ಗ್ರಾಮಸ್ಥರು ಹಾಗೂ ಶ್ರೀಸಂಗನ ಬಸವೇಶ್ವರನ ಭಕ್ತರು ದಾವಿಸಿ ನಿಧಿಕಳ್ಳರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ.

Leave a Reply

Your email address will not be published. Required fields are marked *