ತಾವರಗೇರಾ ದಸರಾ ನೋಡಲು ಬಂತು ಜನಸಾಗರ, ಹಾಲಗಂಬ ಏರಿ ಕಡಗ ತೊಟ್ಟಾನ ಶಿವರಾಜ ಕಟ್ಟಿಮನಿ.

Spread the love

ತಾವರಗೇರಾ ದಸರಾ ನೋಡಲು ಬಂತು ಜನಸಾಗರ, ಹಾಲಗಂಬ ಏರಿ ಕಡಗ ತೊಟ್ಟಾನ ಶಿವರಾಜ ಕಟ್ಟಿಮನಿ.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ದಸರಾ ಹಾಗೂ ಮಹಾನವಮಿ ಹಬ್ಬದ ನಿಮಿತ್ಯ ತಾವರಗೇರಾ ಪಟ್ಟಣ ಹಾಗೂ ಹೋಬಳಿ ಯಾದವ ಸಮಾಜದವತಿಯಿಂದ ಇಂದು ಹಾಲುಗಂಬ ಏರುವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ತಾವರಗೇರಾ ಪಟ್ಟಣದ ವ್ಯಾಪ್ತಿಗೆ ಬರುವ ಯಾದವ್ ಸಮಾಜದ ಯುವಕರು ಹಾಗೂ ತಾವರಗೇರಾ ಹೋಬಳಿಯ ಪ್ರತಿ ಹಳ್ಳಿ ಹಳ್ಳಿಯಿಂದ ಯುವಕರು ಈ ಹಾಲುಗಂಬ ಏರುವ ಕಾರ್ಯಕ್ರಮದಲ್ಲಿ ಪಾಲುಗೊಂಡು ಸತತ ಎರಡು ರಿಂದ ಮೂರು ಗಂಟೆಗಳ ಕಾಲ ಹಾಲುಗಂಬ ಏರುವ ಸ್ಫರ್ಧೆಯಲ್ಲಿ  ನಿರತರಾದರು. ಕೆಲವು ಯುವಕರು ಹಾಲುಗಂಬ ಏರುವಾಗ ಹರಸಹಾಸ ಪಟ್ಟಿರುವ ಸನ್ನಿವೇಶ ರೋಚಕವಾದದ್ದು. ಕೊನೇಗೆ ಹಿರಿಯರ ಆರ್ಶಿವಾದದೊಂದಿಗೆ ಶಿವರಾಜ ತಂ ಹನುಮನಗೌಡ ಕಟ್ಟಿಮನಿ ಸಾ// ತಾವರಗೇರಾ ಇವರು ಹಾಲುಗಂಬ ಏರಿ ಸ್ಫರ್ಧೆಯಲ್ಲಿ ವಿಜೇತರಾದರು. ಕಾಯಕವೆ ಕೈಲಾಸವೆಂಬಂತೆ ಕೃಷಿ ಕಾಯಕ ನಂಬಿ ಬದುಕುತ್ತಿರುವ ರೈತಾಪಿ ಜೀವಿ, ಆ ದೇವರ ಅನುಗ್ರಹದಿಂದ ಇಂದು ಈ ಹಾಲುಗಂಬ ಏರುವ ಕಾರ್ಯಕ್ರಮದಲ್ಲಿ ವಿಜೇತನಾಗಿದ್ದೆನೆ ಎನ್ನುತ್ತಾರೆ.

         ತಾವರಗೇರಾ ಪಟ್ಟಣದ ಊರಿನ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರ ಸೋಗಡು ಕಣ್ಣುತುಂಬಿಕೊಂಡಿತ್ತು. ತಾವರಗೇರಾ ಪಟ್ಟಣದಲ್ಲಿ ಈ ದಸರಾ ಹಬ್ಬದ ಪ್ರಯುಕ್ತ  ಸಾವಿರಾರು ಜನ ಸಂಖ್ಯೆಯಲ್ಲಿ ಈ ಹಾಲುಗಂಬ ಏರುವ ಸ್ಫರ್ದೇ ಕಾರ್ಯಕ್ರಮ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಾಗರವೆ ಹರಿದು ಬಂದಿತ್ತು. ಈ ಹಾಲುಗಂಬ ಏರುವ ಸ್ಪರ್ದೇಗೆ ವಿಜೇತರಾದವರಿಗೆ 11 ತೊಲೆಯ ಬೆಳ್ಳಿ ಕಡಗವನ್ನು ಕಾಂಗ್ರೆಸ್ ಪಕ್ಷದ ಜನಪ್ರಿಯ ಶಾಸಕರಾದ ಶ್ರೀ ಅಮರೇಗೌಡ ಎಲ್ ಬಯ್ಯಾಪೂರ. ಹಾಗೂ ಮಾಜಿ ಶಾಸಕರು ಮತ್ತು ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶ್ರೀ ದೊಡ್ಡನಗೌಡ ಪಾಟೀಲ್ ಇವರು ಸಹ 11 ತೊಲೆಯ ಬೆಳ್ಳಿ ಕಡಗವನ್ನು ಕೋಡುಗೆಯಾಗಿ ಪ್ರತಿ ವರ್ಷದಂತೆ ಈ ವರ್ಷವು ಕೋಡುಗೆ ನೀಡಿದರು. ಒಟ್ಟಿನಲ್ಲಿ ಈ ಹಾಲುಗಂಬ ಏರುವ ಸ್ಪರ್ದೆಯು ನೋಡುಗರ ಮನದಲ್ಲಿ ಉತ್ಸಹವು ತುಂಬಿತ್ತು. ಪ್ರತಿ ವರ್ಷದಂತೆ ಈ ವರ್ಷದಿಂದ ಯಾವುದೇ ಮಹಮಾರಿ ಖಾಯಿಲೆಗಳು ಬಾರದಂತೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ನೇನೆದು ಈ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *