ಸರ್ಕಾರದ ಆದೇಶಕ್ಕೆ ಪ್ರತಿಯೊಬ್ಬರು ತಲೆ ಭಾಗಲೇ ಬೇಕು. ನಮ್ಮ ಆರೋಗ್ಯ ನಮ್ಮ ಕೈಯಲಿ.

Spread the love

ರ್ಕಾರದ ಆಧೇಶಕ್ಕೆ ಪ್ರತಿಯೊಬ್ಬರು ತಲೆ ಭಾಗಲೇ ಬೇಕು. ನಮ್ಮ ಆರೋಗ್ಯ ನಮ್ಮ ಕೈಯಲಿ.

ಇಷ್ಟು ದಿವಸ ಮುನ್ನೆಚ್ಚರಿಕೆ ಕ್ರಮವಾಗಿ  ಸರ್ಕಾರ   ಜನತ ಕರ್ಪ್ಯೂ ವಿಕೆಂಡ್ ಲಾಕಡೌನ್ ಲಾಕಡೌನ್ ಅಂತಾ ಕ್ರಮಗಳನ್ನು ತೆಗೆದುಕೊಂಡುರು  ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹಾಗೆ ಸಾವಿನ ಸಂಖ್ಯೆಯಲ್ಲಿ ಅತಿ ಹೆಚ್ಚು 500 ರ ಗಡಿ ದಾಟಿದೆ ಇಷ್ಟಾದರೂ ಕೂಡ  ಸರ್ಕಾರ ಲಾಕಡೌನ್ ಮಾಡದೇ   ಹೆಸರಿಗೆ ಮಾತ್ರ ಲಾಕಡೌನ್ ಎಂದು ಘೋಷಣೆ ಮಾಡಿದೆ ಎನ್ನುವದು  ಮೆಲ್ನೊಟಕ್ಕೆ ಕಾಣ್ತಾಯಿದೆ ಕೊರೋನ ದ ಸರಪಳಿಂತಿರುವ  ಚೈನ್ ಲಿಂಕ್ ನ್ನು   ಕಟ್ಟು ಮಾಡಬೇಕಾದರೆ  ತಜ್ಞರು ಸೂಚನೆಯಂತೆ ಸಂಪೂರ್ಣ ಲಾಕಡೌನ್ ಮಾಡಬೇಕಾಗಿತ್ತು ಆದರೆ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ದಿಂದ  ಸೂಂಕಿನ ಹಾಗೂ ಸಾವಿನ ಪ್ರಮಾಣ ಕಡಿಮೆ ಆಗಲು ಸಾಧ್ಯವಿಲ್ಲ ಎನ್ನುವುದು ಕೆಲವರ ಅಭಿಪ್ರಾಯ ಹಾಗೆ ಹೀಗೆ ಎನೆ ಹೆಳಲಿ ಸರ್ಕಾರ ತಂಗಳನ್ನಕ್ಕೆ  ಒಗ್ಗರಣೆ ಕೊಟ್ಟಂತೆ  ಮಾಡಿ  ಸರ್ಕಾರ ದ ದೃಷ್ಟಿಯಲ್ಲಿ ಲಾಕಡೌನ್ ಆದರೂ ಇದು ಜನತ ಕರ್ಪ್ಯೂ 2 ನೇ ಬಾಗ ಅಂಥ  ಮೆಲ್ನೊಟಕ್ಕೆ ಕಂಡು ಬರ್ತಾಯಿದೆ ಏನೆ ಆಗಲಿ ಹೋಗಲಿ  ಸರ್ಕಾರ ಏನೆ ನಿರ್ಧಾರ ತೂಗಳ್ಳಲಿ ಬಿಡಲಿ, ನಮ್ಮ ಜೀವನ ನಮ್ಮ ಕೈಯಲ್ಲಿ ನಾವು ಕಾಪಾಡಿಕೊಳ್ಳೋಣ  ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಕೋರೋನಾ ರೋಗದ ವಿರುದ್ಧ ಹೋರಾಡಿ    ನಿಮ್ಮ ಜೀವನ ಕಾಪಾಡಿ. ಎಂದು ಪತ್ರಿಕೆ ಬಯಸುತ್ತದೆ

ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ಮೇ 10 ರ ಬೆಳಗ್ಗೆ 6ಗಂಟೆಯಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಏನಿರುತ್ತೆ? ಏನಿರಲಲ್ಲ ಎಂಬ ಮಾಹಿತಿ ಈ ಕೆಳಗಿನಂತಿದೆ.

ಏನಿರುತ್ತೆ?

  1. ಅಗತ್ಯ ವಸ್ತುಗಳನ್ನು ಖರೀದಿಸಲು ವಾಹನದಲ್ಲಿ ಹೋಗುವ ಹಾಗಿಲ್ಲ, ನಡೆದುಕೊಂಡೆ ಅಂಗಡಿಗಳಿಗೆ ಹೋಗಬೇಕು
  2.  ಆಹಾರ, ಹಾಲು, ಹಣ್ಣು ಮಾಂಸದ ಅಂಗಡಿ ಮಾರಾಟಕ್ಕೆ ಅವಕಾಶ(ಬೆಳಗ್ಗೆ 6 ರಿಂದ 10 ಗಂಟೆ)
  3.  ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ. (ಬೆಳಗ್ಗೆ 6 ರಿಂದ ಸಂಜೆ 6 ಅವಕಾಶ).
  4.  ಎಲ್ಲಾ ಬಗ್ಗೆ ವೈದ್ಯಕೀಯ ಸೇವೆ, ತುರ್ತು ಚಿಕಿತ್ಸೆಗೆ ತೆರಳಲು ಅವಕಾಶ.
  5.  ಕೋವಿಡ್ ನಿಯಮಾವಳಿಯಂತೆ ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ಯಾವುದೇ ರೀತಿಯ ಅಡ್ಡಿಯಿಲ್ಲ.
  6.  ವಿವಾಹ/ಶುಭ ಕಾರ್ಯಕ್ರಮದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಏನಿರಲ್ಲ?

  • ಅಂಗಡಿ ಮುಂಗ್ಗಟ್ಟು, ಮಾರುಕಟ್ಟೆ, ಶಾಪಿಂಗ್ ಮಾಲ್, ಸಿನಿಮಾ ಮಂದಿರ, ಹೊಟೆಲ್, ರೆಸಾರ್ಟ್, ಕೈಗಾರಿಕಾ ಚಟುವಟಿಕೆ ನಿಬಂಧಿಸಲಾಗಿದೆ.
  • ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ಸಂಚಾರ 14 ದಿನಗಳ ಕಾಲ ಬಂದ್ ಆಗಲಿದೆ. ಅಂತಾರಾಜ್ಯ ಬಸ್ ಸಂಚಾರವೂ ಸ್ಥಗಿತ. ಖಾಸಗಿ ವಾಹನಗಳಲ್ಲಿ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
  • ಸಿನಿಮಾ ಹಾಲ್, ಗ್ರಂಥಾಲಯ, ರಂಗಮಂದಿರ, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್.
  •  ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ಇರಲಿದೆ.
  • ಮದ್ಯ ಮಳಿಗೆಯಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಅನುಮತಿ (ನಿರ್ಬಂಧಿತ ಅವಧಿ ಬೆಳಗ್ಗೆ 6 ರಿಂದ 10)

ವರದಿ – ಅಮಾಜಪ್ಪ ಹೆಚ್. ಜುಮಲಾಪೂರ

Leave a Reply

Your email address will not be published. Required fields are marked *