ಆಮ್‌ ಆದ್ಮಿ ಪಾರ್ಟಿಗೆ ರೈತ ಸಂಘ ಬೆಂಬಲ..! ಪರ್ಯಾಯ ರಾಜಕಾರಣಕ್ಕೆ ಹೊಸ ವೇದಿಕೆ ಸಿದ್ಧ..!

Spread the love

ಆಮ್ಆದ್ಮಿ ಪಾರ್ಟಿಗೆ ರೈತ ಸಂಘ ಬೆಂಬಲ..! ಪರ್ಯಾಯ ರಾಜಕಾರಣಕ್ಕೆ ಹೊಸ ವೇದಿಕೆ ಸಿದ್ಧ..!

ರೈತರ ಸಮಸ್ಯೆಗಳ ಪರ ಧ್ವನಿಯಾಗಿ ಸರಕಾರಗಳನ್ನು ಎಚ್ಚರಿಸುತ್ತಾ ಬಂದಿರುವ ರೈತ ಸಂಘ ಮತ್ತು ಹಸಿರು ಸೇನೆ 2023 ಚುನಾವಣಾ ಹೊಸ್ತಿಲಲ್ಲಿ ಪರ್ಯಾಯ ರಾಜಕಾರಣ ಮಾರ್ಗ ಅನುಸರಿಸುತ್ತಿದೆ. ರಾಜ್ಯಾದ್ಯಂತ 1 ಲಕ್ಷ ಮಂದಿ ಪದಾಧಿಕಾರಿಗಳೇ ಇದ್ದಾರೆ. ಸಂಘಟನೆಯ ರೈತ ಸದಸ್ಯರ ಬಲ ದೊಡ್ಡದಿದೆ. ಹೋರಾಟದ ಜತೆಗೆ ರಾಜಕೀಯ ಶಕ್ತಿ ಸಿಕ್ಕಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭ ಎಂಬ ಉದ್ದೇಶಕ್ಕೆ ಸಂಘವು ಆಪ್ಜತೆ ಸೇರಿಕೊಳ್ಳುತ್ತಿದೆ. ರೈತರ ಪರವಾಗಿ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಎಂದೂ ಸ್ಪಷ್ಟಪಡಿಸಿದೆ.

ಆಮ್‌ ಆದ್ಮಿ ಪಾರ್ಟಿಗೆ ರೈತ ಸಂಘ ಬೆಂಬಲ..! ಪರ್ಯಾಯ ರಾಜಕಾರಣಕ್ಕೆ ಹೊಸ ವೇದಿಕೆ ಸಿದ್ಧ..!

ಹೈಲೈಟ್ಸ್‌:

  • ಏಪ್ರಿಲ್ 21ರ ಸಮಾವೇಶಕ್ಕೆ ಕೇಜ್ರಿವಾಲ್‌, ಮಾನ್‌
  • ಸುಮಾರು 42 ವರ್ಷಗಳ ಇತಿಹಾಸ ಹೊಂದಿರುವ ರೈತ ಸಂಘ ಮತ್ತು ಹಸಿರು ಸೇನೆ
  • ರೈತ ಕಲ್ಯಾಣಕ್ಕೆ ರಾಜಕೀಯ ಪ್ರಾಬಲ್ಯ ಬೇಕೇ ಬೇಕು ಎಂಬ ನಿರ್ಧಾರಕ್ಕೆ ಬಂದಿದೆ ರೈತ ಸಂಘ

ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಬಗ್ಗೆ ಪ್ರಸ್ತಾಪ ಮಾಡಿದ್ದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಇದೀಗ ಆಮ್‌ ಆದ್ಮಿ ಪಾರ್ಟಿ ಜತೆ ಸಮ್ಮಿಲನಕ್ಕೆ ಮುಂದಾಗಿದೆ. ಏಪ್ರಿಲ್ 21 ರಂದು ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ರೈತರ ಹಕ್ಕೊತ್ತಾಯ ಸಮಾವೇಶವೂ ರೈತ ಸಂಘ ಮತ್ತು ಆಮ್‌ ಆದ್ಮಿ ‘ಮೈತ್ರಿ’ಯ ವೇದಿಕೆಯಾಗಲಿದೆ. ಸುಮಾರು 42 ವರ್ಷಗಳ ಇತಿಹಾಸ ಹೊಂದಿರುವ ರೈತ ಸಂಘ ಮತ್ತು ಹಸಿರು ಸೇನೆ ರಾಜಕೀಯ ಪ್ರವೇಶಕ್ಕೆ ಮುಂದಾಗಿದೆ. ಹೋರಾಟದ ಜತೆಗೆ ರಾಜಕೀಯ ಅಧಿಕಾರದ ಬಲವಿದ್ದರೆ ರೈತ ಪರ ಕಾರ್ಯ ಸಿದ್ಧಿ ಸುಲಭ ಹಾಗೂ ರೈತ ಕಲ್ಯಾಣಕ್ಕೆ ರಾಜಕೀಯ ಪ್ರಾಬಲ್ಯ ಬೇಕೇ ಬೇಕು ಎಂಬ ಕಾರಣಕ್ಕೆ ಆಪ್‌ಗೆ ಬೆನ್ನೆಲುಬಾಗುವ ನಿರ್ಧಾರಕ್ಕೆ ‘ರೈತ ಶಕ್ತಿ’ ಬಂದಿದೆ. ಬೆಂಗಳೂರಿನ ಬಸವನ ಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಏಪ್ರಿಲ್ 21 ರಂದು ಮಧ್ಯಾಹ್ನ 12 ಗಂಟೆಗೆ ರೈತ ಸಂಘದಿಂದ ಹಕ್ಕೊತ್ತಾಯ ಸಮಾವೇಶ ನಡೆಯುತ್ತಿದೆ. ಗೋದಾವರಿ – ಪೆನ್ನಾರ್‌ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕದ ಪಾಲು ನೀಡಿ ನಂತರ ಆಂಧ್ರ ಪ್ರದೇಶ, ತಮಿಳುನಾಡಿಗೆ ನೀರು ಕೊಡಬೇಕು. ರಾಗಿಯ ಅವೈಜ್ಞಾನಿಕ ಖರೀದಿ ಬಿಡಬೇಕು, ರಾಜ್ಯದಲ್ಲಿಯೂ ಕೃಷಿ ಕಾಯಿದೆ ವಾಪಸ್‌ ಪಡೆಯಬೇಕು, ಕಲ್ಲು ಗಣಿಗಾರಿಕೆ ನಿಯಂತ್ರಿಸಬೇಕು, ಅರ್ಹ ಫಲಾನುಭವಿ ರೈತರಿಗೆ ಸಾಗುವಳಿ ಚೀಟಿ ತಡ ಮಾಡದೆ ಕೊಡಬೇಕು, ರೈತರಿಗೆ ವಿದ್ಯುತ್‌ ಸಮಸ್ಯೆ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಸಮಾವೇಶದಲ್ಲಿ ಹಕ್ಕೊತ್ತಾಯ ಮಾಡಲಾಗುತ್ತಿದೆ.

ಯಾಕೆ ಮೈತ್ರಿ? ರೈತರ ಸಮಸ್ಯೆಗಳ ಪರ ಧ್ವನಿಯಾಗಿ ಸರಕಾರಗಳನ್ನು ಎಚ್ಚರಿಸುತ್ತಾ ಬಂದಿರುವ ರೈತ ಸಂಘ ಮತ್ತು ಹಸಿರು ಸೇನೆ 2023ರ ಚುನಾವಣಾ ಹೊಸ್ತಿಲಲ್ಲಿ ಪರ್ಯಾಯ ರಾಜಕಾರಣ ಮಾರ್ಗ ಅನುಸರಿಸುತ್ತಿದೆ. ರಾಜ್ಯಾದ್ಯಂತ 1 ಲಕ್ಷ ಮಂದಿ ಪದಾಧಿಕಾರಿಗಳೇ ಇದ್ದಾರೆ. ಸಂಘಟನೆಯ ರೈತ ಸದಸ್ಯರ ಬಲ ದೊಡ್ಡದಿದೆ. ಹೋರಾಟದ ಜತೆಗೆ ರಾಜಕೀಯ ಶಕ್ತಿ ಸಿಕ್ಕಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭ ಎಂಬ ಉದ್ದೇಶಕ್ಕೆ ಸಂಘವು ಆಪ್‌ ಜತೆ ಸೇರಿಕೊಳ್ಳುತ್ತಿದೆ. 50,000 ಮಂದಿ ಭಾಗಿ ನಿರೀಕ್ಷೆ ಏಪ್ರಿಲ್ 21 ರ ಸಮಾವೇಶಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಆಗಮಿಸಲಿದ್ದು, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಕೂಡಾ ಇರುತ್ತಾರೆ. ಸಮಾವೇಶದಲ್ಲಿ ತುಮಕೂರು ಜಿಲ್ಲೆಯಿಂದ 4,000 ಕ್ಕೂ ಹೆಚ್ಚು ಮಂದಿ ಸೇರಿದಂತೆ ಇಡೀ ರಾಜ್ಯಾದ್ಯಂತ ಸುಮಾರು 50,000 ಮಂದಿ ಸೇರುವ ನಿರೀಕ್ಷೆಯಿದೆ. ‘ರೈತರ ಪರವಾಗಿ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ. ಹೋರಾಟ ಹೀಗೇ ಮುಂದುವರಿಯುತ್ತದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರಾಜಕೀಯ ಶಕ್ತಿ ಬೇಕು. ಹೀಗಾಗಿ ಪರ್ಯಾಯ ರಾಜಕಾರಣದತ್ತ ಚಿತ್ತ ನೆಟ್ಟಿದ್ದೇವೆ. ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ಆಪ್‌ಗೆ ಬಲ ತುಂಬುವ ರಾಜಕೀಯ ತೀರ್ಮಾನ ಘೋಷಿಸಲಿದ್ದೇವೆ. ಆಪ್‌ ರೈತರ ಪರ ಇರಲಿದೆ ಎಂಬ ವಿಶ್ವಾಸವೂ ಇದೆ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ತುಮಕೂರು ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಹುಲಿಕಟ್ಟೆ ಹೇಳಿದ್ದಾರೆ. ವರದಿ – ಸಂಪಾದಕೀಯ

Leave a Reply

Your email address will not be published. Required fields are marked *