ಡಾ. ಅಂಬೇಡ್ಕರ್ ಕನಸು ನನಸಾಗಿಸುವ ಸಂವಿಧಾನ ಸಾಕ್ಷಿಯ ಮದುವೆಗೆ ಒತ್ತಾಸೆಯಾಗಿ ನಿಲ್ಲೋಣ. ಮದುವೆಯಾಗಲಿರುವ ಜೋಡಿ,,

Spread the love

ಡಾ. ಅಂಬೇಡ್ಕರ್ ಕನಸು ನನಸಾಗಿಸುವ ಸಂವಿಧಾನ ಸಾಕ್ಷಿಯ ಮದುವೆಗೆ ಒತ್ತಾಸೆಯಾಗಿ ನಿಲ್ಲೋಣ. ಮದುವೆಯಾಗಲಿರುವ ಜೋಡಿ,,

ಈ ಸಲದ ಬಾಬಾಸಾಹೇಬ ಅಂಬೇಡ್ಕರ್ ಜಯಂತಿಯನ್ನು  ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ  ರವಿ ಮತ್ತು ಅರ್ಚನಾ ಅತ್ಯಂತ ವಿಶೇಷವಾಗಿ ಆಚರಿಸುತ್ತಿದ್ದಾರೆ. ಅಂದು ಅವರು “ಬುದ್ಧ ಬಸವ ಅಂಬೇಡ್ಕರ ತತ್ವಾದರ್ಶದ ಸಂವಿಧಾನ ಸಾಕ್ಷಿ” ಮದುವೆಯಾಗಲಿದ್ದಾರೆ.  ದಿನಗೂಲಿ ಕಾರ್ಮಿಕರಾದ ರವಿ ಅವರು ಅಂಬೇಡ್ಕರ್ ಅನುಯಾಯಿ. ಅವರ ತತ್ವದಡಿ ಮದುವೆಯಾಗುವ ಕನಸು ಕಟ್ಟಿಕೊಂಡವರು. ಸಮಾನತೆಯ ಹರಿಕಾರರಾದ ಡಾ. ಅಂಬೇಡ್ಕರ್ ಬುದ್ಧ ಬಸವಣ್ಣ ಅವರಿಗೆ ಗೌರವ ಸಲ್ಲಿಸುವದರೊಂದಿಗೆ ಯಾವಗಲ್ಲ  ಗ್ರಾಮದಲ್ಲಿ  ಸರಳವಾಗಿ ಮುಂಜಾನೆ 11 ಗಂಟೆಗೆ ಮದುವೆಯ ಪ್ರಕ್ರಿಯೆಗಳು ಆರಂಭವಾಗುತ್ತವೆ.. ನೀವೂ ಬನ್ನಿ… ಡಾ. ಅಂಬೇಡ್ಕರ್ ಕನಸು ನನಸಾಗಿಸು ವ ಸಂವಿಧಾನ ಸಾಕ್ಷಿಯ ಮದುವೆಗೆ ಒತ್ತಾಸೆಯಾಗಿ ನಿಲ್ಲೋಣ. ಮದುವೆಯಾಗಲಿರುವ ಜೋಡಿ ಈ ಕೆಳಗಿನ ಪ್ರಮಾಣ ವಚನ ಸ್ವೀಕರಿಸಿ ನವಜೀವನಕ್ಕೆ ಕಾಲಿಡಲಿದ್ದಾರೆ. ಗದುಗಿನ ಭಾವ ಸಂಗಮ ವಿವಾಹ ವೇದಿಕೆ ಗೆಳೆಯರ ಬುದ್ಧ ವಂದನೆ, ಬಸವ ಕೇಂದ್ರದ ಗೆಳೆಯರ ವಚನ ವಾಚನ ಜತೆಗೆ ಹಲವು ಹಿರಿಯರ ಶುಭಾಶಯದ ಮಾತುಗಳು ವಿವಾಹವನ್ನು ಸ್ಮರಣೀಯ ಮಾಡಲಿವೆ..

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *