ಕವಿತಾಳ: ಸಂಭ್ರಮದಿಂದ ಜರುಗಿದ ಶ್ರೀ ತ್ರಯಂಬಕೇಶ್ವರ ರಥೋತ್ಸವ ..
ಕವಿತಾಳ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ತ್ರಯಂಬಕೇಶ್ವರ ರಥೋತ್ಸವ ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಜರಗಿತು. ಕೋವಿಡ್ 19 ನಿಂದಾಗಿ ಕಳೆದೆರಡು ವರ್ಷಗಳಿಂದ ಜಾತ್ರೆ ನಡೆಯದ ಕಾರಣ ಇಂದು ಭಕ್ತಾದಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಮಕ್ಕಳಾದಿಯಾಗಿ, ಮಹಿಳೆಯರು ಮತ್ತು ಯುವಕರು ಹೊಸಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು.
ವರದಿ – ಆನಂದ್ ಸಿಂಗ್